ಮೋಕ್ಷದಾಯಕ ಸಪ್ತನಗರಗಳಲ್ಲಿ ಒಂದಾದ, ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿ ಪ್ರಿಯರ ನಗರವೆಂದೇ ಪುರಾಣ ಖ್ಯಾತಿಯ ಅಯೋಧ್ಯೆ ಗತ ಚೆಲುವಿನ ವೈಭವಕ್ಕೆ ಸಜ್ಜಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿನೀಡಿ ಆ.೫ರ ಶ್ರೀರಾಮ ಮಂದಿರ ಭೂಮಿಪೂಜೆ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು. ಸಮಾರಂಭದ ಮೇಲ್ವಿಚಾರಣೆ ಹೊತ್ತಿರುವ ಶ್ರೀರಾಮ ಟೆಂಪಲ್ ಟ್ರಸ್ಟ್ ಸದಸ್ಯರೊಂದಿಗೆ, ಸ್ಥಳೀಯ ಧಾರ್ಮಿಕ ಮುಖಂಡರೊAದಿಗೆ ಸಿಎಂ ಸಭೆ ನಡೆಸಿದರು. ಇದಕ್ಕೂ ಮೊದಲು ಅವರು ರಾಮಜನ್ಮ ಭೂಮಿ ಸ್ಥಳದ ಶ್ರೀರಾಮನಿಗೆ, ಹನುಮಾನ್ ಘರಿಯ ಹನುಮಂತನಿಗೆ ಪ್ರಾರ್ಥನೆ ಸಲ್ಲಿಸಿದರು.
ಐತಿಹಾಸಿಕ ಭೂಮಿಪೂಜೆ ಸಿದ್ಧತೆ ವೀಕ್ಷಿಸಿದ ಯೋಗಿ
Please follow and like us: