ಒಂದೇ ನಿಮಿಷದಲ್ಲಿ ಮಗುವಿನ ಅಳು ನಿಲ್ಲಿಸಬಹುದು ಗೊತ್ತಾ?

 

 

ಣ್ಣ ಮಕ್ಕಳು ಸಾಮಾನ್ಯವಾಗಿ ಹಸಿವಾದಾಗ, ನೋವಾದಾಗ, ಭಯವಾದಾಗ ಅಳುತ್ತಾ ಇರುತ್ತಾರೆ. ಈ ವೇಳೆ ಅಳುವ ಮಕ್ಕಳನ್ನು ನೋಡಿ ಅವರ ತಂದೆ ತಾಯಂದಿರಿಗೆ ಏನು ಮಾಡಬೇಕು, ಹೇಗೆ ಸಮಾಧಾನ ಪಡಿಸಬೇಕು ಗೊತ್ತಾಗುವುದಿಲ್ಲ. ಎತ್ತಿಕೊಂಡು ಲಾಲಿ ಹಾಡು ಹಾಡುವುದು ಸೇರಿದಂತೆ ಏನೇನೊ ಮಾಡಿ ಸುಸ್ತಾಗುತ್ತಾರೆ.

ಆದರೂ ಮಕ್ಕಳು ಅಳು ನಿಲ್ಲಿಸುವುದು ಕಡಿಮೆ.

ನಿಮಗೆ ಗೊತ್ತೇ.? ಜಾಸ್ತಿ ಅಳುವ ಮಕ್ಕಳ ಅಳುವನ್ನು ಕೇವಲ 1 ನಿಮಿಷದಲ್ಲಿ ನಿಲ್ಲಿಸಬಹುದು. ಹೌದು, ಅದಷ್ಟೇ ಅಲ್ಲದೆ ಅವರಿಗೆ ತಗಲುವ ಅನಾರೋಗ್ಯ ಸಮಸ್ಯೆಗಳನ್ನು ಕೆಳಗೆ ಸೂಚಿಸಿದ ಟಿಪ್ಸ್ ಫಾಲೊ ಮಾಡುವ ಮೂಲಕ ಹೋಗಲಾಡಿಸಬಹದು. ಅವೇನೆಂದರೆ.

ದೇಹದೊಳಗಿನ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸ್ವಲ್ಪ ಹೊತ್ತು ಒತ್ತಡ ಹಾಕಿ, ಅಲ್ಲಿ ಮೆತ್ತಗೆ ಮಸಾಜ್ ಮಾಡುವ ಮೂಲಕ ಕೆಲ ವಿಧದ ಅನಾರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ಕೇಳಿದ್ದೇವೆ, ಹೌದು ಅದನ್ನೇ ರಿಪ್ಲೆಕ್ಸಾಲಜಿ ಅಥವಾ ಅಕ್ಯುಪ್ರೆಷರ್ ಎಂದು ಕರೆಯುತ್ತಾರೆ.

ಶ್ವಾಸಕೋಶದಸಮಸ್ಯೆ

ಪಾದಗಳ ಮೇಲೆ ಒತ್ತಡ ಹೇರುತ್ತಾ, ಆ ಪ್ರದೇಶಗದಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡಿದರೆ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ದೂರವಾಗುತ್ತವೆ.

ಹಲ್ಲುತಲೆಸಮಸ್ಯೆಗಳಿಗೆ

ಕಾಲು ಹೆಬ್ಬೆಟ್ಟಿನ ಕೊನೆ ಭಾಗದ ಕೆಲವು ಭಾಗಗಳನ್ನು ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ತಲೆ, ಹಲ್ಲುಗಳಲ್ಲಿ ನೋವು ಇದ್ದರೆ ಅದು ಕಡಿಮೆಯಾಗುತ್ತದೆ.

ಶ್ವಾಸಕೋಶ,ಹೊಟ್ಟೆಮಧ್ಯಭಾಗಕ್ಕೆ

ಕೆಲವು ಮಕ್ಕಳಿಗೆ ಶ್ವಾಸಕೋಶ ಮತ್ತು ಹೊಟ್ಟೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಸೋಲಾರ್ ಪ್ಲೆಕ್ಸಸ್ ಎಂದು ಕರೆಯುತ್ತಾರೆ. ಇದನ್ನು ಕಡಿಮೆ ಮಾಡಬೇಕೆಂದರೆ ಕಾಲು ಹೆಬ್ಬೆರಳುಗಳ ಮಧ್ಯ ಬಾಗದಲ್ಲಿ ಮೆತ್ತಗೆ ಮಸಾಜ್ ಮಾಡಬೇಕು.

ಸೈನಸ್ಸಮಸ್ಯೆ

ಸಣ್ಣ ಮಕ್ಕಳು ಸೈನಸ್ ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕಾಲು ಹೆಬ್ಬೆರಳಿನ ಮಧ್ಯದ ಭಾಗವನ್ನು ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ಮಕ್ಕಳು ಈ ಸಮಸ್ಯೆಯಿಂದ ಮುಕ್ತಿ ಹೊಂದುತ್ತಾರ

ಜೀರ್ಣಸಮಸ್ಯೆಗಳಿಗೆ

ಪಾದಗಳ ಮೇಲೆ ವಕ್ರವಾಗಿ, ಆರ್ಕ್ ರೂಪದಲ್ಲಿ ಇರುವ ಪ್ರದೇಶದಲ್ಲಿ ಮಸಾಜ್ ಮಾಡಿದರೆ ಜೀರ್ಣಾಂಗ ಸಮಸ್ಯೆಗಳು ದೂರವಾಗುತ್ತವೆ. ಆರ್ಕ್ ಕೆಳಗಿನ ಭಾಗದಲ್ಲಿ ಮಸಾಜ್ ಮಾಡಿದರೆ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.

ಇತರಸಮಸ್ಯೆಗಳು.
ಕಾಲಿನ ಹಿಮ್ಮಡಿ ಮೇಲೆ ಮೆತ್ತಗೆ ಮಸಾಜ್ ಮಾಡುವುದರಿಂದ ಮಾಂಸಖಂಡಗಳ ಸಮಸ್ಯೆಗಳು ಕಡಿಮೆಯಾಗುತ್ತವೆ. ಉತ್ತಮ ದೇಹ ಆಕೃತಿ ನಿಮ್ಮದಾಗುತ್ತದೆ.

ಅಳುವಿಗೆ..
ಎರಡು ಪಾದಗಳ ಕೆಳಗಿನ ಮಧ್ಯ ಭಾಗದಲ್ಲಿ ಮಸಾಜ್ ಮಾಡಿದರೆ ಮಕ್ಕಳು ತಕ್ಷಣ ಅಳು ನಿಲ್ಲಿಸುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆಗೈದು ಆಕೆಯ ಶವವನ್ನು ಫ್ರಿಡ್ಜ್ ನಲ್ಲಿಟ್ಟು ವಿಕೃತ ಪ್ರೇಮಿ!

Thu Feb 16 , 2023
    ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆಗೈದು ಆಕೆಯ ಶವವನ್ನು ಫ್ರಿಡ್ಜ್ ನಲ್ಲಿಟ್ಟು ಕೆಲವೇ ಗಂಟೆಗಳಲ್ಲಿ ಮದುವೆಯಾದ ಪ್ರಿಯಕರನ್ನು ದೆಹಲಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ಅಂತಹದೇ ಘಟನೆ ನಡೆದಿದೆ.   ದೆಹಲಿಯ ನಜಾಫ್‍ಗಢ್‍ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಢಾಬಾದಲ್ಲಿ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿ ನಿಕ್ಕಿ ಯಾದವ್ (22) ಎಂಬಾಕೆ ಹತ್ಯೆ […]

Advertisement

Wordpress Social Share Plugin powered by Ultimatelysocial