ಪಶು ಆಹಾರದ ಬೆಲೆ ಇಳಿಕೆ ಮಾಡಿ, ಹಾಲಿನ ಬೆಲೆಯನ್ನು ಏರಿಕೆ ಮಾಡಬೇಕು ಹಾಗೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಹಾಲಿನ ಬೆಲೆಯನ್ನು 40ರೂಗಳಿಗೆ ನಿಗಧಿ ಮಾಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ಜಾನುವಾರುಗಳ ಸಮೇತ ಕಪ್ಪುಪಟ್ಟಿ ಧರಿಸಿ ಕೋಚಿಮುಲ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ತಮ್ಮ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆ ಹೋಗಿದ್ದ ಅನೇಕರು ಇಂದು ಗ್ರಾಮೀಣ ಭಾಗಗಳಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಹೈನೋದ್ಯಮವು ಕೈ ಹಿಡಿದಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದ್ದಾರೆ. ಮನವಿ ಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಒಡವೆಗಳನ್ನು ಅಡವಿಟ್ಟು ಹಸುಗಳನ್ನು ಖರೀದಿಸಿ ಸ್ವಾಭಿಮಾನದ ಜೀವನವನ್ನು ನಡೆಸಲು ಆರಂಭಿಸಿದ್ದಾರೆ. ಉತ್ಪಾದನೆ ಹೆಚ್ಚಾಗಿದೆ ಎಂದು ಕಾರಣ ನೀಡಿ 4 ರೂಗಳನ್ನು ಕಡಿತ ಮಾಡಿರುವುದು ಲಕ್ಷಾಂತರ ಕುಟುಂಬಗಳ ಮರಣಶಾಸನ ಬರೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರದ ರೈತ ಸಂಘದಿಂದ ಪ್ರತಿಭಟನೆ
Please follow and like us: