ಭಾರತದ ಭೂಪ್ರದೇಶಗಳನ್ನು ಸೇರಿಸಿರುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳವು ಬಿಡುಗಡೆ ಗೊಳಿಸಿರುವುದು ರಾಜಕೀಯ ಲಾಭವನ್ನು ಪಡೆಯುವ ದುರುದ್ದೇಶದಿಂದ. ಹಾಗಾಗಿ, ಭಾರತ ಮತ್ತು ನೇಪಾಳದ ನಡುವೆ ಮಾತುಕತೆಯ ವಾತಾವರಣವನ್ನು ಸೃಷ್ಟಿಸುವುದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೊಣೆಗಾರಿಕೆಯಾಗಿದೆ ಎಂಬುದು ಭಾರತದ ನಿಲುವು. ಸತ್ಯಶೋಧನೆ ಅಥವಾ ಪುರಾವೆಗಳೇ ಇಲ್ಲದೆ ಹೊಸ ನಕ್ಷೆ ರಚಿಸಲಾಗಿದೆ. ಇದು ಭಾರತದೊಂದಿಗಿನ ಗಡಿ ವಿವಾದಕ್ಕೆ ರಾಜಕೀಯ ಬಣ್ಣ ನೀಡುವ ಸಂಚಾಗಿದ್ದು, ದಶಕಗಳಿಂದಲೂ ಇರುವಂಥ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸುವಲ್ಲಿ ನೇಪಾಳ ಗಂಭೀರವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮಾತುಕತೆಯ ಪ್ರಸ್ತಾವಕ್ಕೆ ಭಾರತ ಯಾವತ್ತೂ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.
ಗಡಿ ವಿವಾದಕ್ಕೆ ನೇಪಳ ಹೊಣೆ ಎಂದ ಭಾರತ
Please follow and like us: