ಗಡಿ ವಿವಾದಕ್ಕೆ ನೇಪಳ ಹೊಣೆ ಎಂದ ಭಾರತ

ಭಾರತದ ಭೂಪ್ರದೇಶಗಳನ್ನು ಸೇರಿಸಿರುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳವು ಬಿಡುಗಡೆ ಗೊಳಿಸಿರುವುದು ರಾಜಕೀಯ ಲಾಭವನ್ನು ಪಡೆಯುವ ದುರುದ್ದೇಶದಿಂದ. ಹಾಗಾಗಿ, ಭಾರತ ಮತ್ತು ನೇಪಾಳದ ನಡುವೆ ಮಾತುಕತೆಯ ವಾತಾವರಣವನ್ನು ಸೃಷ್ಟಿಸುವುದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೊಣೆಗಾರಿಕೆಯಾಗಿದೆ ಎಂಬುದು ಭಾರತದ ನಿಲುವು. ಸತ್ಯಶೋಧನೆ ಅಥವಾ ಪುರಾವೆಗಳೇ ಇಲ್ಲದೆ ಹೊಸ ನಕ್ಷೆ ರಚಿಸಲಾಗಿದೆ. ಇದು ಭಾರತದೊಂದಿಗಿನ ಗಡಿ ವಿವಾದಕ್ಕೆ ರಾಜಕೀಯ ಬಣ್ಣ ನೀಡುವ ಸಂಚಾಗಿದ್ದು, ದಶಕಗಳಿಂದಲೂ ಇರುವಂಥ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸುವಲ್ಲಿ ನೇಪಾಳ ಗಂಭೀರವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮಾತುಕತೆಯ ಪ್ರಸ್ತಾವಕ್ಕೆ ಭಾರತ ಯಾವತ್ತೂ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಕರಾವಳಿ ಬೆಡಗಿ ಶುಭಪೂಂಜ ಮದುವೆ ..!

Tue Jun 16 , 2020
ಕರಾವಳಿ ಬೆಡಗಿ ಶುಭಪೂಂಜ ಡಿಸೆಂಬರ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಹೌದು ಈ ಸುದ್ದಿಯನ್ನು ಸ್ವತಃ ಶುಭಪೂಂಜ ಅವರೇ ಸ್ಪಷ್ಟಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಅನೇಕ ಚಿತ್ರಗಳ ಮೂಲಕ ಗಮನ ಸೆಳೆದ ಶುಭಪೂಂಜ ಈಗ ಮದುವೆ ಆಗುವ ಖುಷಿಯಲ್ಲಿದ್ದಾರೆ.ಅಂದಹಾಗೆ, ಶುಭಪೂಂಜ ಅವರನ್ನು ಕೈ ಹಿಡಿಯುತ್ತಿರುವ ಹುಡುಗನ ಹೆಸರು ಸುಮಂತ್ ಬಿಲ್ಲವ. ಮೂಲತಃ ಕುಂದಾಪುರದ ವರಾಗಿರುವ ಸುಮಂತ್ ಬಿಲ್ಲವ ಜಯ ಕರ್ನಾಟಕ ಸಂಘಟನೆಯಲ್ಲಿ ಸೌತ್ ವಿಂಗ್ ಅಧ್ಯಕ್ಷರಾಗಿದ್ದಾರೆ. ಜೊತೆಗೆ […]

Advertisement

Wordpress Social Share Plugin powered by Ultimatelysocial