25 ನಿಮಿಷ ಕಾದಾಡಿ ಪ್ರಾಣಬಿಟ್ಟ ನಾಗರಹಾವು ಮತ್ತು ಸಾಕು ನಾಯಿ..!

ಹಾಸನ : ಸಾಕು ನಾಯಿ ಹಾಗೂ ನಾಗರಹಾವಿನ ನಡುವೆ ಕಾದಾಟ ನಡೆದ ಬಳಿಕ ಒಂದೇ ಸಮಯದಲ್ಲಿ ಈ ಎರಡೂ ಪ್ರಾಣೆಗಳು ಜೀವ ಕಳೆದುಕೊಂಡ ಮನಕಲಕುವ ಘಟನೆ ಶುಕ್ರವಾರಸಂತೆ ಬಳಿ ಇಂದು ಸಂಭವಿಸಿದೆ .ಜಿಲ್ಲೆಯ ಸಕಲೇಶಪುರ ತಾಲೂಕಿನ ಶುಕ್ರವಾರ ಸಂತೆ ಬಳಿ ಮಂಜುನಾಥ್ ಎಂಬುವವರಿಗೆ ಸೇರಿದ ನಾಯಿ ಹಾಗೂ ಅವರ ಜಮೀನಿನಲ್ಲಿ ಕಂಡಂತಹ ನಾಗರಹಾವಿನ ನಡುವೆ 25 ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆದಿದೆಈ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. 25 ನಿಮಿಷಕ್ಕೂ ಹೆಚ್ಚು ಕಾಲ ನಾಯಿ ಹಾಗೂ ನಾಗರಹಾವು ಪರಸ್ಪರ ಸೆಣಸಾಡಿ ಪ್ರಾಣ ಬಿಟ್ಟಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಗೋವಾದಲ್ಲಿ ಡಿಕೆಶಿ-ಸಿಟಿ ರವಿ ಭರ್ಜರಿ ಫೈಟ್..!

Sat Jan 29 , 2022
ಪಣಜಿ, -ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇತ್ತು ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.ಗೋವಾದ ಪಣಜಿಯಲ್ಲಿ ಪ್ರತಿಕ್ರಿಯಿಸಿದ ಸಿ. ಟಿ ರವಿ ಅವರು, ಡಿಕೆಶಿ ಮಾಡಿರುವ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ. ಸ್ವತಃ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಡಿಕೆಶಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಹೀಗಿದ್ದರೂ, ಅವರ ಬಾಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತು ಬರುತ್ತಿವೆ. ಭೂತದ […]

Advertisement

Wordpress Social Share Plugin powered by Ultimatelysocial