ಚಿತ್ರನಟ ಅನಂತನಾಗ್‌ ಪಕ್ಷಕ್ಕೆ ಸೇರ್ಪಡೆ ವಿಚಾರದಲ್ಲಿ ಕುತೂಹಲ !

ಬೆಂಗಳೂರು: ಚಿತ್ರನಟ ಅನಂತನಾಗ್‌ ಪಕ್ಷಕ್ಕೆ ಸೇರ್ಪಡೆ ವಿಚಾರದಲ್ಲಿ ಕುತೂಹಲ ಸೃಷ್ಟಿಸಿದ್ದು, ಬುಧವಾರ ನಡೆದ ಸೇರ್ಪಡೆ ಕಾರ್ಯಕ್ರಮದಿಂದ ಅವರು ದೂರ ಉಳಿದಿರುವುದು ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ ಮುಖಂಡರಾದ ಸಪ್ತಗಿರಿ ಶಂಕರ್‌ ನಾಯಕ್‌, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್‌, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಬೂದಿಹಾಳ್‌ ಹನುಮಂತರಾಜು, ಕಾಂಗ್ರೆಸ್‌ ರಾಜ್ಯ ಕಾರ್ಯಕಾರಿಣಿ ಸದಸ್ಯ ತುಳಸಿ ರಾಮ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಉಪಾಧ್ಯಕ್ಷ ನಿರ್ಮಲ್‌ ಕುಮಾರ ಸುರಾನ, ಸಂಘಟನ ಕಾರ್ಯದರ್ಶಿ ಜಿ.ವಿ. ರಾಜೇಶ್‌ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಕಾರ್ಯಕ್ರಮದಲ್ಲಿ ಚಿತ್ರನಟ ಅನಂತನಾಗ್‌ ಕೂಡ ಸೇರ್ಪಡೆಯಾಗುತ್ತಾರೆಂಬ ವದಂತಿ ಹರಡಿತ್ತು. ಆದರೆ ಅವರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅವರು ಸೇರ್ಪಡೆಯಾಗುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

Thu Feb 23 , 2023
ತಾಳ್ಲಪಾಕಂ ಅಣ್ಣಮಾಚಾರ್ಯ ಅವರು ಕರ್ಣಾಟಕ ಸಂಗೀತದ ಪ್ರಾಚೀನ ವಾಗ್ಗೇಯಕಾರರಲ್ಲಿ ಒಬ್ಬರು. ಅನ್ನಮಯ್ಯನೆಂದೇ ಇವರ ಖ್ಯಾತಿ. ಇವರು ತಾಳ್ಲಕವಿಗಳಲ್ಲಿ ಆದ್ಯರು.ಅಣ್ಣಮಾಚಾರ್ಯ ಕೆಲವು ಮೂಲಗಳ ಪ್ರಕಾರ 1408ರಲ್ಲಿ, ಇನ್ನು ಕೆಲವು ಮೂಲಗಳ ಪ್ರಕಾರ 1424ರಲ್ಲಿ ಜನಿಸಿದರು. ತೆಳ್ಳಪಾಕದವರಾದ ನಾರಾಯಣಸೂರಿ ತಂದೆ. ಅಕ್ಕಮಾಂಬ ತಾಯಿ. ಚಿಕ್ಕಂದಿನಿಂದಲೇ ಇವರಿಗೆ ಅಸೀಮವಾದ ಭಗವದ್ಭಕ್ತಿ ಮತ್ತು ಆಶುಕವಿತೆಯ ಪ್ರತಿಭೆಗಳಿದ್ದುವು. ಇವರೊಮ್ಮೆ ತಿರುಪತಿಗೆ ಯಾತ್ರೆಗಾಗಿ ಬಂದಿದ್ದಾಗ ಗುರು ಉಪದೇಶವೂ ಮದುವೆಯೂ ಆದುವು. ಅನಂತರ ಅಹೋಬಲಕ್ಕೆ ತೆರಳಿ ಅಲ್ಲಿ ಆದಿವನ್ ಶಠಕೋಪಯತಿಗಳಲ್ಲಿ […]

Advertisement

Wordpress Social Share Plugin powered by Ultimatelysocial