ಜಿ.ಪಂ ಸದಸ್ಯ ಹಾಗೂ ಸಹಚರರಿಂದ ವೃದ್ಧನ ಮೇಲೆ ಹಲ್ಲೆ

ನೆಲಮಂಗಲ ಅಪಾರ್ಟ್ ಮೆಂಟ್  ಅಸೋಸಿಯೇಷನ್  ಸಭೆಯಲ್ಲಿ ಸಮಸ್ಯೆಗಳ  ಬಗ್ಗೆ  ಧ್ವನಿ  ಎತ್ತಿದ  ವೃದ್ಧನ ಮೇಲೆ  ಜಿಲ್ಲಾ  ಪಂಚಾಯತ್  ಸದಸ್ಯ  ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ಮಾಚೋಹಳ್ಳಿಯ ಜನಪ್ರಿಯ ಟೌನ್ ಶಿಪ್  ಬಳಿ ಘಟನೆ  ನಡೆದಿದೆ. ಜನಪ್ರಿಯ ಟೌನ್ ಶಿಪ್  ಓನರ್ ಅಸೋಸಿಯೇಷನ್ ಸಭೆ ಇದೆ ಎಂದು  ಕರೆಸಿ ಕೊಳಚೆ ನೀರು ಹರಿಯುವ ಬಗ್ಗೆ ಸಭೆಯಲ್ಲಿ  ಧ್ವನಿ ಎತ್ತಿದರೆಂದು ಬಿಳಿಗಿರಿ ರಂಗಬಾಬು ಎಂಬ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ.  ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸದಸ್ಯ ಉದ್ದಂಡಯ್ಯ ಮತ್ತು ಆತನ ಸಹಚರರಾದ ಮೂರ್ತಿ, ರೂಪ ,ಸೋಮಶೇಖರ್, ಎಂಬುವರು ಹಲ್ಲೆ ಮಾಡಿರುವುದಾಗಿ ವೃದ್ಧನ  ಆರೋಪ.ಜಿಲ್ಲಾ  ಪಂಚಾಯತ್  ಸದಸ್ಯ  ಉದ್ದಂಡಯ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಎ ಆರ್  ವಿಶ್ವನಾಥ್  ಆಪ್ತರಾಗಿದ್ದಾರೆ.ಹಲ್ಲೆಗೊಳಗಾದ ವೃದ್ಧ  5 ನಿಮಿಷ ಮೂರ್ಚೆ ಹೋಗಿದ್ದು, ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದ ನಂತರ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ

Sun Jul 19 , 2020
ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳು ಆರಂಭವಾಗುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಚಿವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.ಯಾವುದೇ ಕಾರಣಕ್ಕೂ ಸದ್ಯದ ಮಟ್ಟಿಗೆ ಶಾಲೆಗಳನ್ನು ಆರಂಭಿಸುವ ಮಾತೇ ಇಲ್ಲ ಎಂದು ವೈದ್ಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಮಕ್ಕಳ ಆರೋಗ್ಯ ಕಾಪಾಡಲು ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ […]

Advertisement

Wordpress Social Share Plugin powered by Ultimatelysocial