ನೆಲಮಂಗಲ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ವೃದ್ಧನ ಮೇಲೆ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ಮಾಚೋಹಳ್ಳಿಯ ಜನಪ್ರಿಯ ಟೌನ್ ಶಿಪ್ ಬಳಿ ಘಟನೆ ನಡೆದಿದೆ. ಜನಪ್ರಿಯ ಟೌನ್ ಶಿಪ್ ಓನರ್ ಅಸೋಸಿಯೇಷನ್ ಸಭೆ ಇದೆ ಎಂದು ಕರೆಸಿ ಕೊಳಚೆ ನೀರು ಹರಿಯುವ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿದರೆಂದು ಬಿಳಿಗಿರಿ ರಂಗಬಾಬು ಎಂಬ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸದಸ್ಯ ಉದ್ದಂಡಯ್ಯ ಮತ್ತು ಆತನ ಸಹಚರರಾದ ಮೂರ್ತಿ, ರೂಪ ,ಸೋಮಶೇಖರ್, ಎಂಬುವರು ಹಲ್ಲೆ ಮಾಡಿರುವುದಾಗಿ ವೃದ್ಧನ ಆರೋಪ.ಜಿಲ್ಲಾ ಪಂಚಾಯತ್ ಸದಸ್ಯ ಉದ್ದಂಡಯ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಎ ಆರ್ ವಿಶ್ವನಾಥ್ ಆಪ್ತರಾಗಿದ್ದಾರೆ.ಹಲ್ಲೆಗೊಳಗಾದ ವೃದ್ಧ 5 ನಿಮಿಷ ಮೂರ್ಚೆ ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಜಿ.ಪಂ ಸದಸ್ಯ ಹಾಗೂ ಸಹಚರರಿಂದ ವೃದ್ಧನ ಮೇಲೆ ಹಲ್ಲೆ
Please follow and like us: