“ಪುನೀತ್‌ ಚಿತ್ರ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಕೆಎಂಎಫ್”‌

ಕಳೆದ 3-4 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಒಂದು ವಿಷಯ ಸುಳ್ಳು ಎಂದು ಈಗ ತಿಳಿದು ಬಂದಿದೆ .ಹೌದು ಸಾಮಾಜಿಕ ಜಾಲತಾಣಗಳಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಭಾವಚಿತ್ರವನ್ನು ನಂದಿನಿ ಹಾಲಿನ ಪ್ಯಾಕ್‌ ಮೇಲೆ ಮುದ್ರಿಸಲಾಗಿದೆ ಎಂಬ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆ ವೈರಲ್‌ ಆಗಿತ್ತು,ಆದರೆ ಈ ವಿಷಯ ಸುಳ್ಳಾಗಿದ್ದು ಯಾರೋ ಅಭಿಮಾನಿಗಳು ಈ ರೀತಿ ಎಡಿಟ್‌ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ, ಮೊದಲಿಗೆ ಈ ವಿಷಯ ತಿಳಿದ ಅಭಿಮಾನಿಗಳು ಪುನೀತ್‌ ಚಿತ್ರ ಹೊಂದಿರುವ ಹಾಲಿನ ಪ್ಯಾಕ್‌ ಪೋಟೋವನ್ನು ತಮ್ಮ ಸೊಶಿಯಲ್‌ ಮೀಡಿಯಗಳಲ್ಲಿ ಶೇರ್‌ ಮತ್ತು ಕಾಮೆಂಟ್‌ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದರು, ಆದರೆ ಇದೀಗ ಈ ವಿಷಯ ಸುಳ್ಳು ಎಂದು ಕೆಎಂಎಫ್‌ ಸಂಸ್ಥೆಯು ಸ್ಪಷ್ಟಪಡಿಸಿದೆ. ಫೇಕ್‌ ಎಂದು ತಿಳಿದ ಅಭಿಮಾನಿಗಳು ಈ ರೀತಿ ಮೆಚ್ಚಿದ ನಟನಿಗೆ ಅವಮಾನ ಮಾಡಬೇಡಿ ಎಂದು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

ಟೀಮ್ ಇಂಡಿಯಾ ODI ಉಪ ನಾಯಕನಾಗಿ ಜಸ್ಪ್ರೀತ್ ಬುಮ್ರಾ......

Mon Jan 3 , 2022
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಶುಕ್ರವಾರ ತಂಡವನ್ನು ಪ್ರಕಟಿಸಿದೆ. ಗಾಯಗೊಂಡಿರುವ ರೋಹಿತ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ, ಈ  ಹಿನ್ನೆಲೆಯಲ್ಲಿ ಬಿಸಿಸಿಐ ನ ಆಯ್ಕೆ ಸಮೀತಿ  ಕೆ.ಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಅದೇ ರೀತಿ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ವಹಿಸಿದ್ದಾರೆ. ತಂಡದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್, ಐಪಿಎಲ್‌ ನಾಯಕರಾಗಿರುವ ಅನುಭವಿ ರಿಷಬ್ […]

Advertisement

Wordpress Social Share Plugin powered by Ultimatelysocial