ಪ್ರಯಾಣಿಕರಿಂದ ಭರ್ತಿಯಾದ ಬಿಎಂಟಿಸಿ

ಬೆಂಗಳೂರು: ಲಾಕ್​ಡೌನ್​ ಹಂತ ಹಂತವಾಗಿ ಸಡಿಲಿಕೆ ಆದ ಬೆನ್ನಲ್ಲೇ ಜನರ ಸಂಚಾರಕ್ಕಾಗಿ ಬಿಎಂಟಿಸಿ ಬಸ್​ಗಳು ರಸ್ತೆಗಿಳಿದಿವೆ. ಆದರೆ ಜನ ಮಾತ್ರ ಬಸ್​ಗಳತ್ತ ಮುಖ ಮಾಡುತ್ತಿಲ್ಲರಲಿಲ್ಲ. ಇದಕ್ಕೆ ಕೊರೊನಾ ಭಯ ಕಾರಣ ಇರಬಹುದಾ ಅಂತಾ ಯೋಚಿಸಲಾಗಿತ್ತು. ಆದರೆ ಅಸಲಿ ಕಥೆ ಕೋವಿಡ್​ ಆತಂಕವಲ್ಲ, ಬದಲಿಗೆ ಡೈಲಿ ಪಾಸ್ 70 ರೂಪಾಯಿ ನಿಗದಿ ಮಾಡಿರೋದು ಎಂಬ ಸತ್ಯ ತಿಳಿದುಬಂದಿದೆ. ಸಾಕಷ್ಟು ವಿರೋಧಗಳು ವ್ಯಕ್ತವಾದ ನಂತರ ಬಿಎಂಟಿಸಿ ಟಿಕೆಟ್ ರೇಟಿನಲ್ಲಿ ಸಡಿಲಿಕೆ ತಂದರೂ ಕೂಡಾ, ಕಿಲೋ ಮೀಟರ್ ಪ್ರಯಾಣದ ಮೂಲಕ ಹೊಸ ದರವನ್ನ ನಿಗದಿ ಮಾಡಿತು.‌ ಹೀಗೆ ಹೊಸ ದರ ನಿಗದಿ ಮಾಡಿದ ಬೆನ್ನಲ್ಲೇ, ಖಾಲಿ ಖಾಲಿಯಾಗಿದ್ದ ಬಸ್​​ ನಿಲ್ದಾಣ ಹಾಗೂ ಬಸ್​ಗಳು ಭರ್ತಿಯಾಗಿವೆ. ಜನಸಾಮಾನ್ಯರು ಕೊರೊನಾ ವೈರಸ್ ಭಯವಿಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬಸ್ಸು ಹತ್ತುವ ದೃಶ್ಯಗಳು ಇದೀಗ ಕಂಡುಬಂದಿವೆ.

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ಅಪಘಾತ ಇಬ್ಬರ ಸಾವು

Tue May 26 , 2020
ಕೋಲಾರ ಜಿಲ್ಲೆಯ ಬಂಗಾಪೇಟೆ ತಾಲ್ಲೂಕಿನಲ್ಲಿಬೈಕ್‌ ಮತ್ತು ಸರಕು ಸಾಗಣೆ ವಾಹನದ ಮಧ್ಯೆ ಅಫಘಾತವಾಗಿ ಬೈಕ್ ಸವಾರರುರಿಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ವರವಲಯದ ಕೋಡಿಕಣ್ಣೂರು ಕೆರೆಯ  ಬಳಿ ನಡೆದಿದೆ.  ಶ್ರೀನಿವಾಸ್‌ (21) ಮತ್ತು ನಂದೀಶ್‌  (25) ಮೃತ ದುರ್ದೈವಿಗಳು ಸ್ನೇಹಿತರಾಗಿದ್ದರೂ ಎಂದು ತಿಳಿದು ಬಂದಿದೆ. .ಇವರಿಬ್ಬರು ಕೋಲಾರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸರಕು ಸಾಗಣೆ ವಾಹನದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಕೋಲಾರ […]

Advertisement

Wordpress Social Share Plugin powered by Ultimatelysocial