ಮಲಗಿದ್ದ ದಂಪತಿಯನ್ನು ದುಷ್ಕರ್ಮಿಯೊಬ್ಬ ಹತ್ಯೆ ಮಾಡಿರುವ ಘಟನೆ ಅನಂತಪುರದಲ್ಲಿ ನಡೆದಿದೆ.
ಅನಂತಪುರ (ಆಂಧ್ರಪ್ರದೇಶ): ಮನೆಯ ಮುಂದೆ ಮಲಗಿದ್ದ ದಂಪತಿಯನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಅನಂತಪುರ ಜಿಲ್ಲೆಯ ಯಡಿಕಿ ಗ್ರಾಮದಲ್ಲಿ ನಡೆದಿದೆ.
ನಿಟ್ಟೂರಿನ ಸೊಮ್ಮಕ್ಕ ಮತ್ತು ಬಾಲುರಾಜು ಮೃತರೆಂದು ಗುರುತಿಸಲಾಗಿದೆ. ಅದೇ ಗ್ರಾಮದ ಪ್ರಾಸಾದ್ ಎಂಬ ಆರೋಪಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ದಂಪತಿಯ ಕೊಲೆ ಮಾಡಿ ಸುಮ್ಮನಾಗದ ಕ್ರೋರಿ ಪಕ್ಕದಲ್ಲಿ ಮಲಗಿದ್ದ ಮಗಳನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಜೋರಾಗಿ ಕಿರುಚಾಟ ನಡೆಸಿದ್ದಾಳೆ. ಕಿರುಚಾಟ ಕೇಳಿದ ಗ್ರಾಮದ ಜನ ಕೂಡಲೇ ಎಚ್ಚೆತ್ತು, ವ್ಯಕ್ತಿಯನ್ನು ಕಲ್ಲೆಸೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ