ಮನೆಯ ಹಾಲ್ ನಲ್ಲಿ ಕಾಣಿಸಿಕೊಂಡ ಪಟ್ಟೆ ಕುಕ್ಕರಿ ಅಪರೂಪದ ಹಾವನ್ನು ಸ್ನೇಕ್ ಕಿರಣ್ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಶಿವಮೊಗ್ಗ ನಗರದ ಸಹ್ಯಾದ್ರಿ ನಗರದ ನರಸಿಂಹ ಮೂರ್ತಿ ಎಂಬುವರ ಮನೆಯಲ್ಲಿ ನೆನ್ನೆ ರಾತ್ರಿ ಹಾಲ್ ನಲ್ಲಿ ಇದ್ದಕ್ಕಿದ್ದ ಹಾಗೆ ಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಮನೆಯವರು ಹೇಗೋ ಉಪಾಯ ಮಾಡಿ ಟಬ್ ನಲ್ಲಿ ಹಾಕಿದ್ದಾರೆ. ಇದು ನಾಗರಹಾವೇ ಇರಬೇಕು ಎಂದು ಟಬ್ ಮುಟ್ಟುವ ಪ್ರಯತ್ನ ಮಾಡದ ನರಸಿಂಹಮೂರ್ತಿಯವರು ಸ್ನೇಕ್ ಕಿರಣ್ ಗೆ ಫೋನ್ ಮಾಡಿದ್ದಾರೆ. ತಕ್ಷಣ ಆಗಮಿಸಿದ ಕಿರಣ್ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪಟ್ಟೆ ಕುಕ್ಕರಿ ಹಾವು ಕಾಣಿಸಿಕೊಳ್ಳುವುದು ಅಪರೂಪ. ಇದು ವಿಷಕಾರಿ ಹಾವಲ್ಲ. ನೋಡಲು ಸುಂದರವಾಗಿರುವ ಹಾವನ್ನು ತೋಳದ ಹಾವೆಂದು ಕರೆಯುತ್ತಾರೆ. ಈ ಹಾವಿನ ಬೆಳವಣಿಗೆ ಕಡಿಮೆ ಒಂದುವರೆ ಅಡಿ ಬೆಳೆದರೂ ಹೆಚ್ಚು.ಗರಿಷ್ಠ ಎಂದರೂ ನಾಲ್ಕೈದು ಮೊಟ್ಟೆಗಳನ್ನು ಇಡಬಹುದು ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada