ಮೋಸ ಮಾಡಿದ ಪ್ರಿಯಕರನ ಮನೆಯ ಮುಂದೆ ಧರಣಿ ನಡೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ನಡೆದಿದೆ. ನಾವಿಬ್ಬರು ನಾಲ್ಕು ವರ್ಷದಿಂದ ಪ್ರೀತಿ ಮಾಡುತ್ತಿದ್ದೇವೆ. ಈಗ ನನಗೆ ಮೋಸ ಮಾಡುತ್ತಿದ್ದಾನೆ ಆದರೆ ನಾನು ಆತನನ್ನು ಬಿಟ್ಟು ಬೇರೆಯವರನ್ನು ಮದುವೆ ಆಗುವುದಿಲ್ಲ ನನಗೆ ಆತನೇ ಬೇಕು. ನನಗೆ ನ್ಯಾಯ ನೀಡಿ ಎಂದು ಕುಂದಲಗುರ್ಕಿ ಗ್ರಾಮದ ಗೊಲ್ಲ ಜಾತಿಗೆ ಸೇರಿದ ಮುರಳಿ ಎಂಬುವವರ ಮಗ ಸುನೀಲ್ ಎಂಬ ಹುಡುಗನ ಮನೆಯ ಮುಂದೆ ಹುಡುಗಿಯ ಕುಟುಂಬದವರು ಮತ್ತು ಶಿಡ್ಲಘಟ್ಟ ತಾಲ್ಲೂಕು ವಾಲ್ಮೀಕಿ ಯುವ ಸೇನೆಯೊಂದಿಗೆ ಸೇರಿ ಹುಡುಗನ ಮನೆಯ ಮುಂದೆ ಧರಣಿÀ ಮಾಡಲಾಯಿತು. ಸುಮಾರು ನಾಲ್ಕು ವರ್ಷಗಳಿಂದ ನಿನ್ನನ್ನು ಮದುವೆಯಾಗುತ್ತೇನೆ ಎಂದು ನನಗೆ ಹೇಳಿ ಈಗ ಮನೆಯವರು ನೋಡುತ್ತಿರುವ ಹುಡುಗಿಯನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ. ನನಗೆ ನ್ಯಾಯ ಕೊಡಿ ಎಂದು ಆ ಹೆಣ್ಣುಮಗಳು ಗೋಳಾಡುವಂತಾಗಿದೆ ಆದರೆ ಮನೆಯ ಮುಂದೆ ಧರಣಿ ಮಾಡುತ್ತಿರುವುದು ನೋಡಿ ಹುಡುಗನ ಮನೆಯವರು ಪರಾರಿಯಾಗಿದ್ದಾರೆ. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕೆಂದು ಆಶಯ
ಮೋಸ ಮಾಡಿದ ಪ್ರಿಯಕರನ ಮನೆಯ ಮುಂದೆ ಧರಣಿ
Please follow and like us: