ನಂಜನಗೂಡು ತಾಲೂಕಿನ ನೆಲ್ಲಿ ತಾಳಪುರ ಹಾಗೂ ಚಂದ್ರವಾಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನಾಸಭೆ ಹಾಗೂ ಚುನಾವಣೆ ನಡೆಯಿತು
ಸಂಘದ ಅಧ್ಯಕ್ಷ ರವೀಂದ್ರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ನಿರ್ದೇಶಕರು
ಅಧ್ಯಕ್ಷರು ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದು ನಿರ್ದೇಶಕರುಗಳನ್ನು ಕಡೆಗಣಿಸಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಸಂಘದ 9 ಮಂದಿ ನಿರ್ದೇಶಕರು ಸಹಿ ಮಾಡಿದ ಅವಿಶ್ವಾಸ ನಿರ್ಣಯ ಪತ್ರವನ್ನು ಜನವರಿ 9ರಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಬಾಯಿ ಅವರಿಗೆ ನೀಡಿರುತ್ತಾರೆ
ಅದರ ಪ್ರಕಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಿಂದ ಇಂದು ಚುನಾವಣೆ ಅಧಿಕಾರಿಗಳನ್ನು ನೇಮಿಸಿ ಅವಿಶ್ವಾಸ ಗೊತ್ತುವಳಿಗೆ ಚುನಾವಣೆ ನಡೆಸಲಾಯಿತು
ಸಂಘದಲ್ಲಿ ಒಟ್ಟು 12 ಮಂದಿ ಚುನಾಯಿತ ನಿರ್ದೇಶಕರುಗಳಿದ್ದು ಅದರಲ್ಲಿ ಇಬ್ಬರು ನಿಧನ ಹೊಂದಿರುತ್ತಾರೆ
ಇಂದು ನಡೆದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಎಂಟು ಮಂದಿ ಹಾಜರಾಗಿ ಇಬ್ಬರು ಗೈರು ಹಾಜರಾಗಿರುತ್ತಾರೆ
ಚುನಾವಣೆಗೂ ಮುನ್ನ ಹಾಲಿ ಅಧ್ಯಕ್ಷ ರವೀಂದ್ರ ಹಾಗೂ ಚುನಾವಣಾಧಿಕಾರಿಗಳಿಗೂ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾತಿನ ಚಕಮಕಿ ನಡೆಯಿತು
ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿದ್ದು ಅದರಂತೆ ಚುನಾವಣೆ ನಡೆಯುತ್ತದೆ ಏನಾದರೂ ಅನುಮಾನವಿದ್ದಲ್ಲಿ ನೀವು ಕೋರ್ಟ್ ಮೊರೆ ಹೋಗಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದರು
ಬಳಿಕ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಚುನಾವಣೆ ನಡೆಯಿತು
ಅವಿಶ್ವಾಸ ಗೊತ್ತುವಳಿ ಪರ ಏಳು ಮತಗಳು ಅವಿಶ್ವಾಸ ಗೊತ್ತುವಳಿ ವಿರುದ್ಧ ಕೇವಲ ಒಂದು ಮತ ಬಿದ್ದ ಕಾರಣ ಅವಿಶ್ವಾಸ ಗೊತ್ತುವಳಿ ಪರ ಜಯ ಸಿಕ್ಕಂತಾಗಿ ಹಾಲಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲಾಗಿದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳೂ ಚುನಾವಣಾಧಿಕಾರಿಯೂ ಆದ ಪ್ರಭಾಕರ್ ಸಭೆಗೆ ತಿಳಿಸಿದರು
ಅಧ್ಯಕ್ಷ ರವೀಂದ್ರ ಉಪಾಧ್ಯಕ್ಷ ಕೂಸೇಗೌಡ ನಿರ್ದೇಶಕರುಗಳಾದ ಕೆಂಡಗಣ್ಣಪ್ಪ, ವೀರಭದ್ರಪ್ಪ ,ಹನುಮೇಶ್, ಚಿಕ್ಕ ವೆಂಕಟ ಶೆಟ್ಟಿ, ಮಲ್ಲಿಗಮ್ಮ, ಸುಧಾಮಣಿ ಸೇರಿದಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿಬಾಯಿ ಸಭೆಯಲ್ಲಿ ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada