ಬೀದರ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳ ದುರ್ನಡತೆ ಬಗ್ಗೆ ಸಚಿವರಿಗೆ, ಈಶಾನ್ಯ ಸಾರಿಗೆ ಸಂಸ್ಥೆಯ ನೌಕರರು ದೂರು ನೀಡಿದ್ದಾರೆ. ಇಂದು ಸಚಿವ ಪ್ರಭು ಚೌಹಾಣ್, ಔರಾದ ಪಟ್ಟಣದ ಪೊಲೀಸ ಠಾಣೆ ಮತ್ತು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ನೌಕರರಿಗೆ ಮಾಸ್ಕ್ ವಿತರಿಸಿದರು .ಈ ಸಂಧರ್ಭದಲ್ಲಿ ಔರಾದ ತಾಲ್ಲೂಕು ಘಟಕದ ಸಾರಿಗೆ ಸಂಸ್ಥೆ ನೌಕರರ ಸಂಘದ ಅಧ್ಯಕ್ಷರು ಕರೋನಾ ವೈರಸ್ ನಿಂದ ಲಾಕ್ಡೌನ್ ಸಡಿಲಿಕೆ ಆದನಂತರ, ಸಾರಿಗೆ ಸಂಸ್ಥೆ ಅಧಿಕಾರಿಗಳು ನೌಕರರಿಗೆ ನೀಡುತ್ತಿರುವ ಕಿರಕುಳ ಬಗ್ಗೆ ದೂರು ನೀಡಿ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಹಾಗೂ ಸಾರಿಗೆ ಸಂಸ್ಥೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಚಿವರಿಗೆ ಮನವಿಯನ್ನು ಸಲ್ಲಿಸಿದರು
ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳ ವಿರುದ್ಧ ದೂರು
Please follow and like us: