ಕರ್ನಾಟಕದ ಜನಪ್ರಿಯ ನಿರೂಪಕರಲ್ಲಿ ಅನುಶ್ರೀ ಸಹ ಒಬ್ಬರು.
ಕರುನಾಡಲ್ಲೇ ಎಲ್ಲೇ ಅದ್ಧೂರಿಯಾದ ಕಾರ್ಯಕ್ರಮಗಳಿದ್ದರು ಅಲ್ಲಿ ಅನುಶ್ರೀಯವರು ಇದ್ದೇ ಇರುತ್ತಾರೆ. ಈಕೆಯ ಮಾತಿನ ಶೈಲಿಗೆ ಅದೆಷ್ಟೋ ರಾಜ್ಯಾದ್ಯಂತ ಹಲವಾರು ಅಭಿಮಾನಿಗಳಿದ್ದಾರೆ. ಆದರೆ ಅನುಶ್ರೀ ಅವರ ಜೀವನದಲ್ಲಿ ನಡೆದಿರುವ ತಮಾಷೆಯ ಸನ್ನಿವೇಶವೊಂದನ್ನು ಸಂದರ್ಶನದಲ್ಲಿ ಹೇಳಿದ್ದಾರೆ.
ಅನುಶ್ರೀಯವರು ಇತ್ತೀಚೆಗೆ ಟಿವಿ ಚಾನೆಲ್ಗಳಲ್ಲಿ ಮಾತ್ರವಲ್ಲದೇ, ಯೂಟ್ಯೂಬ್ನಲ್ಲಿ ತನ್ನದೇ ಆದ ಚಾನೆಲ್ ಅನ್ನು ರಚಿಸಿಕೊಂಡು ಬಹಳಷ್ಟು ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದಾರೆ. ಇತ್ತೀಚೆಗೆ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಶುಭ ಪೂಂಜ ಮತ್ತು ಅವರ ಪತಿ ಸುಮಂತ್ ಅನುಶ್ರೀ ಅವರ ಸಂದರ್ಶನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅನುಶ್ರೀಯವರು ಅವರ ಜೀವನದ ಕೆಲವು ತಮಾಷೆಯ ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಅನುಶ್ರೀ ಹಾಗೂ ಶುಭಾ ಪೂಂಜಾ ಬಹುಕಾಲದ ಗೆಳೆಯರು. ಇಬ್ಬರೂ ಸಹ ಮೂಲತಃ ಮಂಗಳೂರಿನವರಾಗಿದ್ದರಿಂದ ಮೊದಲಿನಿಂದಲೇ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುತ್ತಿದ್ದರು. ಅದೇ ರೀತಿ ಒಂದು ದಿನ ಶುಭಾ ಮನೆಗೆ ಅನುಶ್ರೀ ಹೋಗಿದ್ದಾಗ, ಬಹಳಷ್ಟು ಹಸಿದಿದ್ದ ಅನುಶ್ರೀ ತಿನ್ನಲು ಏನಿದೆ ಎಂದು ಶುಭಾ ಬಳಿ ಕೇಳಿದ್ದಾರೆ. ಅಷ್ಟರಲ್ಲಿ ಶುಭಾ ಅವರು ಏನೋ ತುರ್ತು ಕೆಲಸದಲ್ಲಿದ್ದರಿಂದ ಚಿಕನ್ ಮಾಡಿದ್ದೇನೆ, ಡೈನಿಂಗ್ ಟೇಬಲ್ ಮೇಲೆ ಇದೆ ತಿನ್ನು ಎಂದು ಹೇಳುತ್ತಾ ಅವರ ಕೆಲಸಕ್ಕೆ ತೆರಳಿದ್ದರು.
ಶುಭಾ ಈ ರೀತಿ ಹೇಳುತ್ತಿದ್ದ ಹಾಗೆಯೇ ಅನುಶ್ರೀಯವರು ತಕ್ಷಣ ಟೇಬಲ್ ಮೇಲಿದ್ದ ಅನ್ನ ಮತ್ತು ಚಿಕನ್ ಸಾರನ್ನು ಬಡಿಸಿಕೊಂಡರು. ಆದರೆ ಆ ಸಾರಿನಲ್ಲಿ ಮಾತ್ರ ಉಪ್ಪು, ಖಾರಾ ಏನೂ ಇಲ್ಲದಿರುವುದರಿಂದ ಅಸಮಾಧಾನ ಮಾಡಿಕೊಂಡು ತಿಂದಿದ್ದಾರೆ.
ನಂತರ ಶುಭಾ ಪೂಂಜಾರವರು ಮತ್ತೆ ಬಂದ ಬಳಿಕ, ಅನುಶ್ರೀಯವರು ‘ಏನಿದು, ನಿಮ್ಮ ಮನೆಯ ಚಿಕನ್ ಸಾರಿನಲ್ಲಿ ಉಪ್ಪು, ಖಾರಾ ಏನು ಇಲ್ಲ’ ಎಂದು ಹೇಳಿದ್ದಾರೆ.
ಇದನ್ನು ಕೇಳಿ ತಕ್ಷಣ ಶುಭಾ ಅವರು, ಡೈನಿಂಗ್ ಟೇಬಲ್ ಮೇಲಿದ್ದ ಪಾತ್ರೆಯ ಮುಚ್ಚಳ ತೆಗೆದು ನೋಡಿ, ಇದು ನಾಯಿಗೆ ಹಾಕಲು ಮಾಡಿಟ್ಟ ಚಿಕನ್ ಎಂದಿದ್ದಾರೆ.
ಇದನ್ನು ಅನುಶ್ರೀಯವರು ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಅವರನ್ನು ಸಂದರ್ಶನ ಮಾಡುತ್ತಿರುವ ಸಂದರ್ಭದಲ್ಲಿ ಶುಭಾ ಮತ್ತು ಅನುಶ್ರೀ ಫ್ರೆಂಡ್ಶಿಪ್ ಬಗ್ಗೆ ಹೇಳಿಕೊಳ್ಳಬೇಕಾದ್ರೆ ಇದೊಂದು ನಮ್ಮ ಜೀವನದ ನೋವಿನ ಘಟನೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಇದಷ್ಟೇ ಅಲ್ಲದೇ, ನಾಯಿಗೆ ಹಾಕೋ ಆಹಾರವನ್ನು ಡೈನಿಂಗ್ ಮೇಲೆ ಯಾರಾದರೂ ಇಡ್ತಾರಾ ಎಂದು ನಗುತ್ತಲೇ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ. ಒಟ್ಟಾರೆ ಈ ಸಂದರ್ಶನದಲ್ಲಿ ಸಖತ್ ತಮಾಷೆಯ ವಿಚಾರಗಳು ಹೊರಬಂದಿದ್ದು, ಯೂಟ್ಯೂಬ್ ಚಾನೆಲ್ ನಲ್ಲಿ ಇದರ ವಿಡಿಯೋ ಲಭ್ಯವಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada