ನಂಜನಗೂಡಿನಲ್ಲಿ ದುಷ್ಕರ್ಮಿಗಳಿಂದ ಮಿಠಾಯಿ ಅಂಗಡಿಗೆ ಬೆಂಕಿ
ನಂಜನಗೂಡು ಪಟ್ಟಣದ ಚಿನಿವಾರಕಟ್ಟೆ ಬೀದಿಯಲ್ಲಿರುವ ಸಿಹಿ ತಿನಿಸುಗಳ ಮತ್ತು ಕಡಲೆಪುರಿ ಅಂಗಡಿ
ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅಂಗಡಿ
ಸೋಮವಾರ ಬೆಳಗಿನ ಜಾವ ಯಾರೋ ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಾಕಿದ್ದಾರೆ
ಇದರಿಂದಾಗಿ ಅಂಗಡಿಯಲ್ಲಿದ್ದ ಸಿಹಿ ಮತ್ತು ಕಾರ ತಿನಿಸುಗಳು ,ಕಡಲೆ .ಪುರಿ ಸೇರಿದಂತೆ ಮತ್ತಿತರ ವಸ್ತುಗಳು ಸುಟ್ಟು ಭಸ್ಮವಾಗಿ ನಷ್ಟ ಉಂಟಾಗಿದೆ .
ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಯಾರು ಮಲಗದೆ ಇದ್ದ ಕಾರಣ ಅದೃಷ್ಟ ವಸಾತ್ ಭಾರಿ ಅನಾಹುತ ತಪ್ಪಿದಂತಾಗಿದೆ.
ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ .
ಅಂಗಡಿ ಮಾಲೀಕರು ಮಾತನಾಡಿ ಇದನ್ನೇ ನಂಬಿ ಜೀವನ ಮಾಡುತ್ತಿದ್ದ ನಮಗೆ ಘಟನೆಯಿಂದಾಗಿ ದಿಕ್ಕು ತೋಚದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು ಅಲ್ಲದೆ ಎಷ್ಟೇ ದೂರವಾಣಿ ಕರೆ ಮಾಡಿದರು ಅಗ್ನಿಶಾಮಕದಳದವರು ಬರದೇ ಇದ್ದ ಕಾರಣ ಸ್ಥಳೀಯರೇ ಬೆಂಕಿಯನ್ನು ನಂದಿಸಿದ್ದಾರೆ ಅಲ್ಲದೆ ಇಲ್ಲಿ ಪೊಲೀಸ್ ಗಸ್ತು ಸಹ ಇಲ್ಲದೆ ಇರುವುದರಿಂದ ಘಟನೆಗೆ ಇದು ಸಹ ಕಾರಣವಾಗಿದೆ ಎಂದು ಆರೋಪಿಸಿದರು
ಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada