ಸೋಮವಾರದಂದು ಯಡ್ರಾಮಿ ತಾಲೂಕಿನ ದಂಡಾಧಿಕಾರಿ ನೇತೃತ್ವದಲ್ಲಿ ಅಕ್ರಮವಾಗಿ ಮರಳು ಸಾಗಣಿಕೆಯ ಟಿಪ್ಪರ್ ವಶಕ್ಕೆ ಪಡೆದ ನಂತರ ಸುಮಾರು ರಾತ್ರಿ 7 ಗಂಟೆಗೆ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಏಕಾಏಕಿ ನಾಪತ್ತೆ ಆಗುತ್ತದೆ.ಮರಳು ಸಾಗಾಣಿಕೆ ಮಾಡುತ್ತಿರುವ ಟಿಪ್ಪರ್ ಪೊಲೀಸ್ ಠಾಣೆ ಆವರಣದಲ್ಲಿ ಕೂಡ ಇಲ್ಲಾ ಇತ್ತ ತಾಲೂಕ ಕಚೇರಿಯ ಆವರಣದಲ್ಲಿ ಇಲ್ಲಾ ಹಾಗಾದರೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ ಎಲ್ಲಿ ಎಂಬುವುದೇ ಯಕ್ಷಪ್ರಶ್ನೆಯಾಗಿದೆ.ತಹಸೀಲ್ದಾರ ಅವರಿಗೆ ಈ ಮರಳು ಸಾಗಣಿಕೆಯ ಟಿಪ್ಪರ್ ಬಗ್ಗೆ ಮಾಹಿತಿ ಕೇಳಿದರೆ ಈ ಅಧಿಕಾರಿ ಉತ್ತರ ಕೇಳಿ ತಾಲೂಕಿನ ಜನರು ಧನ್ಯರು ಆಗುತ್ತಾರೆ ಒಂದು ತಾಲೂಕಿನ ದಂಡಾಧಿಕಾರಿ ಆಗಿದ್ದ ಆ ಅಧಿಕಾರಿ ವರದಿಗಾರರ ಪ್ರಶ್ನೆಗೆ ಉತ್ತರ ನೋಡಿ ನಿಮಗೇಕೆ ಏಕೆ ಬೇಕು ಅದೆಲ್ಲಾ, ಅವರು ನಕಲಿ ಕೀ ಹಚ್ಚಿ ಟಿಪ್ಪರ್ ರಾತೋ ರಾತ್ರಿ ಪರಾರಿ ಮಾಡಿಕೊಂಡು ಹೋಗಿದ್ದಾರೆ, ನೀವೇ ಹುಡುಕಿಕೊಂಡು ಬನ್ನಿ ಹೋಗಿ ಅಂತ ಉತ್ತರ ನೀಡುತ್ತಾರೆ.ಈ ಪ್ರಕರಣ ಕುರಿತು ನಾವು ತಹಸೀಲ್ದಾರ ಅವರಿಗೆ ಪ್ರಶ್ನೆ ಮಾಡಿದರೆ ಅವರ ಉತ್ತರ ನೋಡಿದರೆ ಅಧಿಕಾರಿಯ ಏನೋ ಕೈವಾಡ ಇದೆಯಾ ಎಂಬುವರ ಬಗ್ಗೆ ಯಡ್ರಾಮಿ ಪಟ್ಟಣದ ಜನರ ಮಧ್ಯೆ ಎರಡು ದಿನದಿಂದ ಬಿಸಿ ಬಿಸಿ ಚರ್ಚೆ ಆಗ್ತಾ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada