ಧಾರಾಕಾರ ಮಳೆಗೆ ಬಟ್ಲಹಳ್ಳಿ ಮುಖ್ಯ ರಸ್ತೆ ಬಂದ್:
ಚಿಂತಾಮಣಿ: ಧಾರಾಕಾರ ಮಳೆಯಿಂದ ಬ್ರಾಹ್ಣಣರಹಳ್ಳಿ ಬಳಿ ಕುಶಾವತಿ ನದಿ ತುಂಬಿ ಹರಿಯುತ್ತಿರುವ ಕಾರಣ, ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಮುಖ್ಯರಸ್ತೆ ಬಂದ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹಳ್ಳಿಗಳಾದ ಬ್ರಾಹ್ಣಣರಹಳ್ಳಿ, ಬೊಮ್ಮಲಾಕಪುರ, ವೈ ಗೊಲ್ಲಹಳ್ಳಿ, ಮಾದಮಂಗಲ, ಕೊನಪ್ಪಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ತುಂಬಿ ಹರಿಯುತ್ತಿರುವ ಕುಶಾವತಿ ನದಿ
ಧಾರಾಕಾರ ಮಳೆಗೆ ಉಕ್ಕಿ ಹರಿದ ಕುಶಾವತಿ ನದಿ:
ರಾತ್ರಿ ಸುರಿದ ಧಾರಾಕರ ಮಳೆಗೆ ಚಿಂತಾಮಣಿ ತಾಲೂಕಿನ ಬ್ರಾಹ್ಮಣರ ಹಳ್ಳಿ ಬಳಿ ಕುಶಾವತಿ ನದಿ ಉಕ್ಕಿ ಹರಿಯುತ್ತಿದೆ. ಬತ್ತಿದ ನದಿಯಲ್ಲಿ ನೀರು ನೋಡಿ ರೈತರು ಸಂತಸಗೊಂಡಿದ್ದಾರೆ. ನದಿ ತುಂಬಿ ಹರಿಯುತ್ತಿರುವ ಅಪರೂಪದ ದೃಶ್ಯ ನೋಡಲು ಜನರು ಧಾವಿಸಿದ್ದಾರೆ.