ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಸಂಬಂಧ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಂತ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದರು.ಶರ್ಟ್ ಧರಿಸದೇ ವಿಚಾರಣೆಗೆ ಹಾಜರಾದಂತ ವ್ಯಕ್ತಿಯ ಬಗ್ಗೆ ವಕೀಲರು ಆಕ್ಷೇಪಿಸಿದ ಕಾರಣ, ಹೈಕೋರ್ಟ್ ಗರಂ ಆಗಿತ್ತು. ಈ ಬಳಿಕ ಅಚಾತುರ್ಯದಿಂದ ಆದಂತ ಘಟನೆ ಅಂತ ವ್ಯಕ್ತಿ ಕೋರ್ಟ್ ಗೆ ಬೇಷರತ್ ಕ್ಷಮೆ ಕೇಳಿದ ಕಾರಣದಿಂದ, ಇಂದು ಶ್ರೀಧರ್ ಭಟ್ ಗೆ ಹೈಕೋರ್ಟ್ ( ಕ್ಷಮಾದಾನ ನೀಡಿದೆ.ನವೆಂಬರ್ 30, 2021ರಂದು ಹೈಕೋರ್ಟ್ ನ್ಯಾಯಪೀಠವು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಪ್ರಕರಣ ಸಂಬಂಧ ಶ್ರೀಧರ್ ಭಟ್ ಎಂಬುವರು, ಶರ್ಟ್ ಧರಿಸದೇ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತ ಪಡಿಸಿದ್ದರುಈ ಸಂಬಂಧ ಇಂದು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠದ ಮುಂದೆ ಶ್ರೀಧರ್ ಭಟ್, ಅಚಾತುರ್ಯದಿಂದ ನಡೆದಂತ ಘಟನೆಯಾಗಿದೆ. ತಮ್ಮ ತಪ್ಪನ್ನು ಕ್ಷಮಿಸುವಂತೆ ಬೇಷರ್ ಕ್ಷಮೆ ಯಾಚಿಸಿದರು. ಈ ಹಿನ್ನಲೆಯಲ್ಲಿ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಸಮ್ಮತಿಯ ಮೇರೆಗೆ ಹೈಕೋರ್ಟ್ ನ್ಯಾಯಪೀಠವು ಮುಂದೆ ಹೀಗೆ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ, ಕ್ಷಮಾದಾನ ನೀಡಿದೆ. ಈ ಮೂಲಕ ಶ್ರೀಧರ್ ಭಟ್ ಗೆ ಬಿಗ್ ರಿಲೀಫ್ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada