ಅದಕ್ಕೆ ಕಾರಣವನ್ನು ರಶ್ಮಿಕಾ ನೀಡಿದ್ದು, ಅದನ್ನು ತಿಳಿಯಲು ಮುಂದೆ ಓದಿ.
‘ಆಡವಾಳು ಮೀಕು ಜೊಹ್ರಾಲು’ ಹೆಸರಿನ ತೆಲುಗು ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದು, ಶರ್ವಾನಂದ ನಾಯಕರಾಗಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ನಡೆದ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲು ಇಷ್ಟಪಡುವುದಿಲ್ಲ. ಬದಲಾಗಿ ಗಂಡು ಮಗುವಾಗಿ ಜನಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಆಡವಾಳು ಮೀಕು ಜೊಹ್ರಾಲು ಸಿನಿಮಾದಲ್ಲಿ ಓರ್ವ ಮದುಮಗಳಾಗಿ ಹೆಣ್ಣು ಮಗಳು ಎದುರಿಸುವ ಸವಾಲುಗಳನ್ನು ತೋರಿಸಲಾಗಿದೆ. ನಮಗೆ ಇಷ್ಟವೋ? ಇಲ್ಲವೋ? ಹುಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಬಟ್ಟೆ ಧರಿಸಬೇಕು, ಹುಡುಗರ ಸಂಬಂಧಿಕರ ಮುಂದೆ ನಾವು ತಲೆ ಬಾಗಬೇಕಿದೆ. ಈ ಸಂಕಟವನ್ನು ನೋಡಿ ನಾನು ಮುಂದಿನ ಜನ್ಮದಲ್ಲಾದರೂ ಹೆಣ್ಣಾಗಿ ಹುಟ್ಟಬಾರದು ಎಂದು ಬಯಸಿದ್ದೇನೆ. ಏಕೆಂದರೆ, ಗಂಡು ಮಕ್ಕಳು ಕಾಲು ಮೇಲೆ ಕಾಲು ಹಾಕಿಕೊಂಡು ಬೇಕಾದ ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲವು ಅವರ ಇಚ್ಛೆಯಂತೆ ನಡೆಯುತ್ತದೆ ಎಂದರು. ಇದೇ ವೇಳೆ ಯಾವ ರೀತಿಯ ಹುಡುಗ ಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಮದುವೆ ಆಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದರು.
ಅಂದಹಾಗೆ ಆಡವಾಳು ಮೀಕು ಜೊಹ್ರಾಲು ಸಿನಿಮಾವನ್ನು ತಿರುಮಲ ಕಿಶೋರ್ ನಿರ್ದೇಶನ ಮಾಡಿದ್ದಾರೆ. ಚಿತ್ರವು ಮಾರ್ಚ್ 4ರಂದು ಬಿಡುಗಡೆಯಾಗಿದೆ. ಹಿರಿಯ ನಟಿಯರಾದ ಖುಷ್ಬೂ, ರಾಧಿಕಾ ಶರತ್ಕುಮಾರ್, ಊರ್ವಶಿ ಮುಂತಾದವರ ಬಹು ತಾರಾಗಣವೇ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada