ಕೆಎಸ್ಆರ್ಟಿಸಿ ನೌಕರರಿಗೆ ಹೆಚ್ಚಿಸಬೇಕಾಗಿದ್ದ ತುಟ್ಟಿಭತ್ಯೆ ಹೆಚ್ಚಳವನ್ನ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ತಡೆಹಿಡಿದಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ನೌಕರರ ಭತ್ಯೆಯನ್ನ ಹೆಚ್ಚಿಸಬೇಕಾಗಿತ್ತು ಆದರೆ ಕೊರೊನಾ ಕಾರಣದಿಂದಾಗಿ ಈಗಾಗಲೇ ನಷ್ಟದಲ್ಲಿರುವ ಕೆಎಸ್ಆರ್ಟಿಸಿ ಭತ್ಯೆಯನ್ನ ಹೆಚ್ಚಿಸಲಾಗುವುದಿಲ್ಲಮತ್ತು ೨೦೨೧ರ ಜನವರಿಯಲ್ಲಿ ಹೆಚ್ಚಿಸಬೇಕಾಗಿದ್ದ ತುಟ್ಟಿಭತ್ಯೆ ದರವನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟನೆಯನ್ನ ನೀಡಿದೆ.
Please follow and like us:
Sat Jul 18 , 2020
ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ (70) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು. ಕಿರುತೆರೆಯ ಪ್ರೇಮಲೋಕ ಧಾರವಾಹಿಯಲ್ಲಿ ಅವರು ನಟಿಸ್ತಾ ಇದ್ದರು. ಇತ್ತೀಚೆಗೆ ಧಾರಾವಾಹಿಯ ಶೂಟಿಂಗ್ನಲ್ಲೂ ಅವರು ಭಾಗಿಯಾಗಿದ್ದರು. ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವನ ಗಂಗಾಧರ್ ತೆಂಗುಬೆಳೆಗಾರರೂ ಆಗಿದ್ದರು. […]