ಈ ದೊಡ್ಡ ಚಿತ್ರ ಲೂಸ್ ಮಾದ ಯೋಗಿ ಪಾಲು!

ಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ 2010ರಲ್ಲಿ ತೆರೆಕಂಡ ‘ನಮ್ ಏರಿಯಾಲ್ ಒಂದ್ ದಿನ’ ಎಂಬ ಚಿತ್ರದ ಮೂಲಕ ಒಟ್ಟಿಗೆ ಕನ್ನಡ ಚಲನಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ಬಳಿಕ ಇಬ್ಬರೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಒಂದೊಂದೇ ಹೆಜ್ಜೆ ಇಡುತ್ತಾ ಮೇಲೆ ಬಂದವರು.ಮೊದಲಿಗೆ ಇಬ್ಬರು ನಟರಿದ್ದ ಪಾತ್ರದಲ್ಲಿ ನಟಿಸಿ ನಂತರ ಏಕನಾಯಕನಿರುವ ಚಿತ್ರಗಳ ಅವಕಾಶ ಪಡೆದುಕೊಂಡ ರಕ್ಷಿತ್ ಶೆಟ್ಟಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಬ್ರೇಕ್ ಪಡೆದು ಬಳಿಕ ತಾವೇ ನಟನಾಗಿ ಹಾಗೂ ನಿರ್ದೇಶಕನಾಗಿ ಉಳಿದವರು ಕಂಡಂತೆ ಚಿತ್ರ ಮಾಡಿ ಗೆದ್ದರು. ಈ ಚಿತ್ರದಲ್ಲಿ ರಿಷಬ್ ಶೆಟ್ಟಿಯೂ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.ಇತ್ತ ಸಹ ನಟನಾಗಿ ಹಲವು ಚಿತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ರಿಷಬ್ ಶೆಟ್ಟಿ ರಿಕ್ಕಿ ಎಂಬ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ಈ ಚಿತ್ರದಲ್ಲಿ ನಾಯಕನನ್ನಾಗಿ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಯನ್ನು ರಿಷಬ್ ಆರಿಸಿಕೊಂಡಿದ್ದರು. ಹೀಗೆ ಇಬ್ಬರೂ ಸಹ ತಮ್ಮ ನಿರ್ದೇಶನದ ಮೊದಲ ಚಿತ್ರಗಳಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಂಡಿದ್ದ ಈ ಜೋಡಿ ತಮ್ಮ ನಂತರದ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡಿತ್ತು.ಅದರಲ್ಲಿಯೂ ಕಿರಿಕ್ ಪಾರ್ಟಿ ರೀತಿಯ ಬೃಹತ್ ಚಿತ್ರವನ್ನು ನೀಡಿದ ಈ ಸ್ನೇಹಿತರು ಮತ್ತೊಮ್ಮೆ ‘ಬ್ಯಾಚುಲರ್ ಪಾರ್ಟಿ’ಗಾಗಿ ಒಂದಾಗಿದ್ದರು. ಹೌದು, ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್ ಹಾಗೂ ದಿಗಂತ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ಪೋಸ್ಟರ್ ಅನ್ನೂ ಸಹ ಬಿಡುಗಡೆಗೊಳಿಸಲಾಗಿತ್ತು. ಆದರೆ ಕಾಂತಾರ ಬಳಿಕ ರಿಷಬ್ ಶೆಟ್ಟಿ ಈ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಬೇಕಿದ್ದ ಪಾತ್ರಕ್ಕೆ ಬದಲಿ ನಟನ ಆಯ್ಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಬೇಕಿದ್ದ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ. ಕೆಲವರು ಇದು ಸರಿಯಾದ ಆಯ್ಕೆ ಎಂದಿದ್ದರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಲೂಸ್ ಮಾದ ಯೋಗಿ ಇದೇ ವರ್ಷ ತೆರೆಕಂಡಿದ್ದ ‘ಹೆಡ್ ಬುಷ್’ ಚಿತ್ರದಲ್ಲಿ ಗಂಗಾ ಎಂಬ ಪಾತ್ರವನ್ನು ಮಾಡಿ ಜನರ ಮನ ಗೆದ್ದು ಮತ್ತಷ್ಟು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ರಂಜಿಸಲು ಇಚ್ಛಿಸುತ್ತೇನೆ ಎಂದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

G20 ಶೃಂಗ ಸಭೆ ಬ್ಯಾನರ್ ಗಳಲ್ಲಿ ಕನ್ನಡ ಮಾಯಾ.

Thu Dec 15 , 2022
ಈ ಹಿನ್ನೆಲೆಯಲ್ಲಿ ಬ್ಯಾನರ್ ಗಳಿಗೆ ಕಪ್ಪು ಬಣ್ಣ ಬಳೆದ ಅಪರಿಚಿತ ವ್ಯಕ್ತಿಗಳು.ಕನ್ನಡ ಬಳಸಿ ಎಂದು ಶೃಂಗ ಸಭೆ ಬ್ಯಾನರ್ ಗೆ ಬರೆದಿರುವ ಅಪರಿಚಿತ ವ್ಯಕ್ತಿಗಳು ಏರ್ಪೋರ್ಟ್ ರಸ್ತೆಯಲ್ಲಿ ಅಳವಡಿಕೆ ಮಾಡಲಾಗಿದ್ದ ಬ್ಯಾನರ್ ಮೇಲೆ ಬರೆದಿರುವ ವ್ಯಕ್ತಿಗಳು13 ರಿಂದ 17 ರವರೆಗೆ ನಡೆಯಲಿರುವ ಶೃಂಗಸಭೆ.ದೇವನಹಳ್ಳಿ ಬಳಿಯ ಕೊಡಗುರ್ಕಿ ಸಮೀಪದ ಜೆ ಡಬ್ಲ್ಯೂ ಮ್ಯಾರಿಟೋ ಹೋಟೆಲ್ ನಲ್ಲಿ ಸಭೆಕನ್ನಡ ಬಳಸಿ ಎಂದೂ ಬರೆದಿರುವ ಬ್ಯಾನರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್.ಏರ್ಪೋರ್ಟ್, ದೇವನಹಳ್ಳಿ, ಯಲಹಂಕ ಸುತ್ತಮುತ್ತ […]

Advertisement

Wordpress Social Share Plugin powered by Ultimatelysocial