ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಗೆಲುವು ಖಚಿತ ಎಂದು ಮಾಜಿ ಶಾಸಕ ಕೆ. ಎನ್ ರಾಜಣ್ಣತಿಳಿಸಿದರು. ಶಿರಾ ಉಪಚುನಾವಣೆ ಬೆನ್ನಲೆ ಹುಳಿಗೆರೆ ತಾಲೂಕಿನ ಗೊಲ್ಲರಟ್ಟಿ ಗ್ರಾಮ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಜಯಚಂದ್ರ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೂ ಅವರಿಗೆ ಮತನೀಡಿದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಹೀಗಾಗಿ ಬಿ. ಜೆ. ಪಿ ಸರ್ಕಾರ ಕಾಡು ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಕೇವಲ ಮತ ಪಡೆಯಲು ಮಾತ್ರ ನಿಗಮದಲ್ಲಿ ಯಾವುದೇ ಹಣ ಇಟ್ಟಿಲ್ಲ ಎಂದು ತಿಳಿಸಿದರು. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಗೊಲ್ಲ ಹಟ್ಟಿಗಳಿಗೆ ಬಂದರೆ ಗೌರವ ಕೊಡಿ ಆದರೆ ಬಿಜೆಪಿಗೆ ಮತ ನೀಡಬೇಡಿ ಎಂದು ತಿಳಿಸಿದರು.