ಬಡಗಿ (ಕಾರ್ಪೆಂಟರ್)ಯ ಕತ್ತು ಕೊಯ್ದು ಭೀಕರವಾಗಿ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿರುವ ದುರ್ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ದೊಡ್ಡಬಸ್ತಿ ಮುಖ್ಯರಸ್ತೆಯ ಸರ್ ಎಂವಿ ಲೇಔಟ್ ನ ನಿರ್ಜನ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಂಗನಹಳ್ಳಿಯ ವೀರಭದ್ರೇಶ್ವರ ಲೇಔಟ್ನ ಕಾರ್ಪೆಂಟರ್ ಜೊತೆಗೆ ಮನೆ ನಿವೇಶನ ತೋರಿಸುವ ಬ್ರೋಕರ್ ಆಗಿದ್ದ ದಿನೇಶ್ ಕುಮಾರ್(೪೬) ಕೊಲೆಯಾದವರು ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ದೊಡ್ಡಬಸ್ತಿ ಮುಖ್ಯರಸ್ತೆಯ ಸರ್ ಎಂವಿ ಲೇಔಟ್ನ ಫೆಡರಲ್ ಬ್ಯಾಂಕ್ ರಸ್ತೆಯ ಬಳಿ ಬೈಕ್ನಲ್ಲಿ ರಾತ್ರಿ ೮.೪೦ರ ವೇಳೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗ್ನಿಂದ ದಿನೇಶ್ ಕತ್ತು ಕೊಯ್ದು ಶವವನ್ನು ಪಕ್ಕದ ಖಾಲಿ ಜಾಗದಲ್ಲಿ ಲಾಂಗ್ ಎಸೆದು ಪರಾರಿಯಾಗಿದ್ದಾರೆ. ಕೊಲೆಗೆ ಮುನ್ನ ಮನೆಗೆ ರಾತ್ರಿ ೮.೨೦ರ ವೇಳೆ ಬೈಕ್ನಲ್ಲಿ ತರಕಾರಿಯನ್ನು ತಂದು ಮಗಳಿಗೆ ಕೊಟ್ಟು ದಿನೇಶ್ ಕುಮಾರ್ ಅರ್ಜೆಂಟ್ ಕೆಲಸ ಇರುವುದಾಗಿ ಹೋಗಿದ್ದರು.
ಇದಾದ ಅರ್ಧ ಗಂಟೆಯಲ್ಲಿ ಕಿಶೋರ್ ಎನ್ನುವರು ಬಂದು ದಿನೇಶ್ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದಿದ್ದು ಅವರ ಕಿವಿ ಕತ್ತರಿಸಲಾಗಿದೆ ಎಂದು ತಿಳಿಸಿದ್ದು ಸ್ಥಳಕ್ಕೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದೆ ಎಂದು ದಿನೇಶ್ ಕುಮಾರ್ ಪತ್ನಿ ಲಕ್ಷ್ಮೀ ದೂರು ನೀಡಿರುವ ದೂರು ದಾಖಲಿಸಿರುವ ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada