ಕಾರು ಹಾಗೂ ಲಾರಿ ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲಿ ಒಂದೆ ಕುಟುಂಬದ 4 ಜನ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜವಗೇರಾದ ಬಾಲಯ್ಯ ಕ್ಯಾಂಪ ಹತ್ತಿರ ಇಂದು ಮುಂಜಾನೆ 6.30 ಕ್ಕೆ ನಡೆದಿದೆತಾಲ್ಲೂಕಿನ ಜವಳಗೇರಾ ಹತ್ತಿರ ಬಾಲಯ್ಯ ಕ್ಯಾಂಪ ಬಳಿ ಭೀಕರ ಅಪಘಾತ ನಡೆದಿದ್ದು ಕಾರಿನಲ್ಲಿದ್ದ ಪ್ರದೀಪ ಸೆಕ್ಷನ್.35 ಇತನ ಹೆಂಡತಿ ಫುರ್ಣಿಮ ಗಂಡ ಪ್ರದೀಪ ವ.30 ಜತೀನ ತಂದೆ ಅಮರದೀಪ ವ.12 ಮಾಯೀನ್ ತಂದೆ ಅಮರಧೀಪ.ವ.7 ಈ 4 ಜನ ಒಂದೆ ಕುಟುಂಬದ ಗಂಡ ಹೆಂಡತಿ ಮಕ್ಕಳಾಗಿದ್ದಾರೆ ಎಂದು ಪೋಲೀಸ ಮೂಲಗಳಿಂದ ತಿಳಿದು ಬಂದಿದೆ
ಬೆಂಗಳೂರಿನಿಂದ ಹೈದ್ರಾಬಾದ್ ಹೊರಟ ಕಾರು ನಂ TS.08 H.G. 5584 ತೆಲಂಗಾಣ ದಿಂದ ಸಿಂಧನೂರು ಕಡೆಗೆ ಹೊರಟ ಲಾರಿ ನಂ. AP.21.Y.6498 ಇಂದು ಮುಂಜಾನೆ 6.30ಕ್ಕೆ ಜವಗೇರಾದ ಬಾಲಯ್ಯ ಕ್ಯಾಂಪ ಹತ್ತಿರ ಈ ಬೀಕರ ಅಪಘಾತ ನಡೆದಿದೆ
ಸುದ್ದಿ ತಿಳಿದು ಸಿಪಿಐ ಉಮೇಶ ಕಾಂಬಳೆ ಬಳಗಾನೂರ ಠಾಣೆಯ ಪಿಎಸ್ಐ ವಿರೇಶ ಸ್ಥಳಕ್ಕೆ ಹೋಗಿ ಪರಿಶೀಲನೆ ನೆಡೆಸಿ ಶವಗಳನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಶವಗರಕ್ಕೆ ತಂದಿದ್ದಾರೆ ವಿಷಯ ತಿಳಿದು ಸುತ್ತ ಮುತ್ತಲಿನ ಜನ ಅಪಘಾತ ನಡೆದ ಸ್ಥಳಕ್ಕೆ ಬಂದು ನೀಡುತ್ತಿದ್ದಾರೆ ಸ್ಥಳದಲ್ಲಿ ಸ್ವಲ್ಪ ಸಮಯ ಸಂಚಾರ ಅಸ್ತ ವ್ಯಸ್ತ ಗೊಂಡು ಪ್ರಯಾಣಿಕರ ಪರದಾಟ ನಡೆಸಿದರು ಈ ಕುರಿತು ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: