ನಟಿ ಊಹಾ ಕುಟುಂಬಸ್ಥರ ಸಾಕ್ಷಿಯಾಗಿ ದೇವರ ಮುಂದೆ ಪ್ರೇಮ ನಿವೇದನೆ ಮಾಡಿದ್ದ ಗಂಗಾವತಿಯ ನಟ ಶ್ರೀಕಾಂತ್.

100 ತೆಲುಗು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿರುವ ಶ್ರೀಕಾಂತ್ ಅವರು ಇಂದು ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದ ಶ್ರೀಕಾಂತ್ ಅವರು ಸಿನಿಮೀಯ ರೀತಿಯಲ್ಲಿ ಅವರ ಧರ್ಮಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದರಂತೆ.ಶ್ರೀಕಾಂತ್, ಊಹಾ ಅವರು ಒಟ್ಟಾಗಿ ಸಿನಿಮಾಗಳನ್ನು ಮಾಡಿದ್ದಾರೆ. ಊಹಾ ಅವರಿಗೆ ಶಿವರಂಜಿನಿ ಎಂದೂ ಹೆಸರಿದೆ. ‘ಅಮೆ’, ‘ಕೂತುರು’, ‘ಆಯನ ಗಾರು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ ಬೆಳೆದಿತ್ತು. ಆನಂತರ ಇದೇ ಹುಡುಗಿಯನ್ನು ಮದುವೆಯಾಗಬೇಕು ಎಂದು ಶ್ರೀಕಾಂತ್ ಅವರು ಫಿಕ್ಸ್ ಆದರಂತೆ. ಒಂದು ದಿನ ಊಹಾ ಮನೆಗೆ ಹೋಗಿ ದೇವರ ಕೋಣೆಯ ಮುಂದೆ ಕುಟುಂಬಸ್ಥರ ಮುಂದೆ ‘ಐ ಲವ್ ಯು’ ಎಂದು ಹೇಳಿ ಪ್ರೇಮ ನಿವೇದನೆ ಮಾಡಿದ್ದರಂತೆ. ಶ್ರೀಕಾಂತ್ ಮಾತು ಊಹಾ ಮನೆಯವರೆಲ್ಲ ಕಂಗಾಲಾಗಿದ್ದರು. ಕೊನೆಗೂ ಎಲ್ಲರೂ ಒಪ್ಪಿದ ಬಳಿಕವೇ ಶ್ರೀಕಾಂತ್-ಊಹಾ ಮದುವೆಯಾದರು.1997ರಲ್ಲಿ ಶ್ರೀಕಾಂತ್, ಊಹಾ ಮದುವೆಯಾದರು. ಈ ದಂಪತಿಗೆ ರೋಶನ್, ರೋಹನ್, ಮೇಧಾ ಎಂಬ ಮಕ್ಕಳಿದ್ದಾರೆ. ಯಾವುದೇ ಜಾತಕ ನೋಡದೆ ಮಕ್ಕಳಿಗೆ ಆರ್ ಹೆಸರಿನಿಂದಲೇ ರೋಶನ್, ರೋಹನ್ ಎಂದು ಹೆಸರಿಡಲಾಗಿತ್ತಂತೆ. ರೋಶನ್ ಅವರು ಚಿತ್ರರಂಗಕ್ಕೆ ಈಗಾಗಲೇ ಎಂಟ್ರಿ ಕೊಟ್ಟಿದ್ದು, ಕಳೆದ ವರ್ಷ ಕನ್ನಡ ನಟಿ ಶ್ರೀಲೀಲಾ ಜೊತೆ ‘ಪೆಲ್ಲಿ ಸೆಂದD’ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಶ್ರೀಕಾಂತ್ ಪುತ್ರಿ ಮೇಧಾ ಅವರು ಶೀಘ್ರದಲ್ಲಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವರದಕ್ಷಿಣೆ ಕಿರುಕುಳ ಪ್ರಕರಣ;

Fri Feb 24 , 2023
ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ(Nawazuddin Siddiqui) ವಿರುದ್ಧ ಅವರ ಮಾಜಿ ಪತ್ನಿ ಜೈನಾಬ್ ಸಲ್ಲಿಸಿದ್ದ ಎರಡು ಮನವಿಗಳನ್ನು ಇಲ್ಲಿನ ನ್ಯಾಯಾಲಯ ತಿರಸ್ಕರಿಸಿದೆ.ಸಿದ್ದಿಕಿ ವಕೀಲರ ಪ್ರಕಾರ, ಜೈನಾಬ್ ನಾನು ಸಿದ್ದಿಕಿ ಹೆಂಡತಿ ಎಂದು ಸುಳ್ಳು ಹೇಳಿಕೊಂಡು ಸಿದ್ದಿಕಿ ವಿರುದ್ಧಅನೇಕ ದೂರುಗಳನ್ನು ದಾಖಲಿಸಿದ್ದಳು ಎನ್ನಲಾಗಿದೆ.ನಾವು ದಂಪತಿಯ ವಿಚ್ಛೇದನ ಪತ್ರಗಳನ್ನು ಸಲ್ಲಿಸಿದ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಎರಡು ಪ್ರಕರಣಗಳನ್ನು […]

Advertisement

Wordpress Social Share Plugin powered by Ultimatelysocial