‘ವಾಹನ ಸವಾರ’ರೇ ಗಮನಿಸಿ: ‘ಆಗುಂಬೆ ಘಾಟ್’ ರಸ್ತೆ 10 ದಿನ ಬಂದ್

ಶಿವಮೊಗ್ಗ: ಈಗಾಗಲೇ ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಹಲವು ಬಾರಿ ಬಂದ್ ಆಗಿದ್ದಂತ ಆಗುಂಬೆ ರಸ್ತೆ ( Agumbe Ghat Road ), ಈಗ ಮತ್ತೆ ಬಂದ್ 10 ದಿನ ಬಂದ್ ಆಗಲಿದೆ.ಈ ಕುರಿತಂತೆ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ( National Highway ) ಆಗುಂಬೆ-ಹೆಬ್ರಿವರೆಗೆ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಮಾರ್ಚ್ 5 ರಿಂದ 15ರವರೆಗೆ ಹತ್ತು ದಿನ ಬೆಳಿಗ್ಗೆ 7 ರಿಂದ ಸಂಜೆ 7ರವೆರೆಗೆ ಆಗುಂಬೆ ಘಾಟ್ ( Agumbhe Ghat ) ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.ಇನ್ನೂ ಲಘು ವಾಹನಗಳು ತೀರ್ಥಹಳ್ಳಿ – ಕೊಪ್ಪ, ಶೃಂಗೇರಿ, ಮಾಳ, ಕಾರ್ಕಳ ಮೂಲಕ ಉಡುಪಿ ತಲುಪಬಹುದು. ಭಾರಿ ವಾಹನಗಳು ತೀರ್ಥಹಳ್ಳಿ, ಮಾಸಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ ಮೂಲಕ ಉಡುಪಿಗೆ ಈ ಪರ್ಯಾಯ ರಸ್ತೆ ಮಾರ್ಗದ ಮೂಲಕ ತೆರಳುವಂತೆ ಸೂಚಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಲತಿ ಶರ್ಮ

Wed Mar 2 , 2022
ಮಾಲತಿ ಶರ್ಮ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ಸಿರಿಕಂಠದ ಮೂಲಕ ಸುಗಮ ಸಂಗೀತ ಪ್ರೇಮಿಗಳ ಹೃದಯಲ್ಲಿ ರಾರಾಜಿತರಾಗಿದ್ದಾರೆ. ಮಾಲತಿ ಶರ್ಮ 1951 ಮಾರ್ಚ್ 2ರಂದು ಜನಿಸಿದರು. ಮಾಲತಿ ಶರ್ಮ ಅವರು ಆಕಾಶವಾಣಿ ಮತ್ತು ದೂರದರ್ಶನದ ಪ್ರಥಮ ದರ್ಜೆ ಕಲಾವಿದರೆಂಬ ಖ್ಯಾತಿ ಪಡೆದವರು. ಕನ್ನಡದ ಸುಪ್ರಸಿದ್ಧ ಸುಗಮ ಸಂಗೀತ ಗಾಯಕಿ ತಮ್ಮ ಅತ್ತಿಗೆ ರತ್ನಮಾಲಾ ಪ್ರಕಾಶರ ಜೊತೆಯಲ್ಲಿ ಮಾಲತಿಶರ್ಮ ಅವರು ಭಾರತದೆಲ್ಲೆಡೆ ಹಾಗೂ ವಿಶ್ವದ ಅನೇಕ ಕಡೆಗಳಲ್ಲಿ ಕನ್ನಡ […]

Advertisement

Wordpress Social Share Plugin powered by Ultimatelysocial