‘ವಾಹನ ಸವಾರ’ರೇ ಗಮನಿಸಿ: ‘ಆಗುಂಬೆ ಘಾಟ್’ ರಸ್ತೆ 10 ದಿನ ಬಂದ್ | Agumbe Ghat Road |

ಶಿವಮೊಗ್ಗ: ಈಗಾಗಲೇ ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಹಲವು ಬಾರಿ ಬಂದ್ ಆಗಿದ್ದಂತ ಆಗುಂಬೆ ರಸ್ತೆ ( Agumbe Ghat Road ), ಈಗ ಮತ್ತೆ ಬಂದ್ 10 ದಿನ ಬಂದ್ ಆಗಲಿದೆ.ಈ ಕುರಿತಂತೆ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ( National Highway ) ಆಗುಂಬೆ-ಹೆಬ್ರಿವರೆಗೆ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಮಾರ್ಚ್ 5 ರಿಂದ 15ರವರೆಗೆ ಹತ್ತು ದಿನ ಬೆಳಿಗ್ಗೆ 7 ರಿಂದ ಸಂಜೆ 7ರವೆರೆಗೆ ಆಗುಂಬೆ ಘಾಟ್ ( Agumbhe Ghat ) ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.ಇನ್ನೂ ಲಘು ವಾಹನಗಳು ತೀರ್ಥಹಳ್ಳಿ – ಕೊಪ್ಪ, ಶೃಂಗೇರಿ, ಮಾಳ, ಕಾರ್ಕಳ ಮೂಲಕ ಉಡುಪಿ ತಲುಪಬಹುದು. ಭಾರಿ ವಾಹನಗಳು ತೀರ್ಥಹಳ್ಳಿ, ಮಾಸಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ ಮೂಲಕ ಉಡುಪಿಗೆ ಈ ಪರ್ಯಾಯ ರಸ್ತೆ ಮಾರ್ಗದ ಮೂಲಕ ತೆರಳುವಂತೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿತೀಶ್ ಕುಮಾರ್

Wed Mar 2 , 2022
  ನೀತೀಶ್ ಕುಮಾರ್ ದೇಶ ಕಂಡ ನಿಷ್ಠಾವಂತ ರಾಜಕಾರಣಿಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ ಭವ್ಯತೆಗೆ ಹೆಸರಾಗಿದ್ದು ಸ್ವಾತಂತ್ರ್ಯಾ ನಂತರದಲ್ಲಿ ನಿರಂತರ ಢಕಾಯಿತಿ, ಗೂಂಢಾಗಿರಿ, ಭ್ರಷ್ಟತೆ, ಅರಾಜಕತೆಗಳನ್ನು ನಿರಂತರವಾಗಿ ಕಂಡ ಬಿಹಾರವನ್ನು, ತಮ್ಮ ಶ್ರದ್ಧೆ ನಿಷ್ಠೆಗಳ ಮೂಲಕ ಸಮಾಧಾನಕಾರ ಹಾದಿಗೆ ತಂದ ನೀತೀಶ್ ಕುಮಾರ್ ಅವರ ಕೆಲಸ ಅಸಾಮಾನ್ಯವಾದದ್ದು. ಸಾಮಾನ್ಯವಾಗಿ ರಾಜಕೀಯದಲ್ಲಿ ಧರ್ಮ, ಜಾತೀಯತೆ, ಎಡ, ಬಲ ಮುಂತಾದ ವಾದಗಳಲ್ಲಿ ಬುದ್ಧಿವಂತ ಜನಾಂಗ ಸಿಲುಕಿ ಏನೂ ಮಾಡದೆ ನಿಲ್ಲುವಾಗ, ನೀತೀಶ್ ಕುಮಾರ್ […]

Advertisement

Wordpress Social Share Plugin powered by Ultimatelysocial