‘ಪುಷ್ಪ 2’ಗೂ ಮುನ್ನ ಮತ್ತೊಂದು ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ !

 

ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ‘ಪುಷ್ಪ’ ಸಿನಿಮಾ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರುತ್ತಿದ್ದಂತೆ ಅಲ್ಲು ಅರ್ಜುನ್ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ‘ಪುಷ್ಪ’ ಬ್ಲಾಕ್‌ ಬಸ್ಟರ್ ಹಿಟ್ ಆದ ಬಳಿಕ ‘ಪುಷ್ಪ 2’ಗಾಗಿ ಕಾದು ಕೂತಿದ್ದಾರೆ.

ಅಲ್ಲು ಅರ್ಜುನ್‌ಗೆ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸಿನಿಮಾ ‘ಪುಷ್ಪ’ ಬಳಿಕ ಸೀಕ್ವೆಲ್‌ಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಕಾದು ಕೂತಿದ್ದಾರೆ. ಆದ್ರೀಗ ‘ಪುಷ್ಪ 2’ಗೂ ಮುನ್ನ ಮತ್ತೊಂದು ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

‘ಪುಷ್ಪ 2’ಗೂ ಮುನ್ನ ಮತ್ತೊಂದು ಸಿನಿಮಾ

‘ಪುಷ್ಪ 2’ ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವುದಕ್ಕೆ ಚಿತ್ರತಂಡ ಸ್ಕೆಚ್ ಹಾಕಿಕೊಂಡಿದೆ. ಹೀಗಾಗಿ ಸಿನಿಮಾ ಸೆಟ್ಟೇರುವುದು ತಡವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಸುಕುಮಾರ್ ಇನ್ನೂ ಸ್ಕ್ರಿಪ್ಟ್‌ನಲ್ಲಿ ಬ್ಯುಸಿಯಾಗಿರುವುದರಿಂದ ‘ಪುಷ್ಪ 2’ ಸೆಟ್ಟೇರುವುದು ತಡವಾಗಬಹುದು ಎಂದು ಅಂದಾಜಿಸಲಾಗಿದೆ.

‘ಪುಷ್ಪ’ ಸ್ವೀಕ್ವೆಲ್ ತಡವಾಗುತ್ತಿರುವುದರಿಂದ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾಗೆ ಕೈ ಹಾಕಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸ್ಟೈಲಿಶ್ ಸ್ಟಾರ್ ಮತ್ತೊಂದು ಕಥೆಯನ್ನು ಕೇಳಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

‘ಪುಷ್ಪ 2’ ಸಿನಿಮಾದ ಕಥೆಯೇನು?

ಕೆಲವು ದಿನ ಹಿಂದೆ ‘ಪುಷ್ಪ 2’ ಸಿನಿಮಾ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅಲ್ಲು ಅರ್ಜುನ್ ‘ಪುಷ್ಪ 2’ ಬಿಟ್ಟು ಬೇರೆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಗುಲ್ಲೆದ್ದಿತ್ತು. ಆದ್ರೀಗ ಪ್ಯಾನ್ ಇಂಡಿಯಾ ಸ್ಟಾರ್ ಯೂಟರ್ನ್ ತೆಗೆದುಕೊಳ್ಳುತ್ತಾರೆ ಅಂತ ಹೇಳಾಗಿದೆ.

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಮೇಲೆ ಒತ್ತಡ ಹೆಚ್ಚಾಗಿದೆ. ‘ಕೆಜಿಇಫ್ 2’ ಸಿನಿಮಾ ಮೆಗಾ ಬ್ಲಾಕ್‌ಬಸ್ಟರ್ ಆದ ಬಳಿಕ ‘ಪುಷ್ಪ 2’ ದೊಡ್ಡ ಹಿಟ್ ಆಗಲೇ ಬೇಕು ಅಂತ ನಿರ್ಧರಿಸಿದ್ದಾರೆ ಪಣತೊಟ್ಟಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಈ ಮಧ್ಯೆ ಅಲ್ಲು ಅರ್ಜುನ್ ಹೊಸ ಸಿನಿಮಾ ಬಗ್ಗೆ ಬೇರೆ ಗುಲ್ಲೆದ್ದಿದೆ. ಆದರೆ, ಅಲ್ಲು ಅರ್ಜುನ್ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ಕರ್‌ ಸಮಿತಿ ಸೂರ್ಯಗೆ ಆಹ್ವಾನ: ಈ ಗೌರವ ಲಭಿಸಿದ ದಕ್ಷಿಣ ಭಾರತದ ಮೊದಲ ನಟ

Fri Jul 1 , 2022
ಚೆನ್ನೈ: ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆಅವರನ್ನು ಆಹ್ವಾನಿಸಲಾಗಿದೆ. ಭಾರತದಿಂದ ಹಿಂದಿ ನಟಿ ಕಾಜೊಲ್‌ ಹಾಗೂ ನಿರ್ದೇಶಕಿ ರೀಮಾ ಕಾಗ್ತಿ ಅವರನ್ನೂ ಆಹ್ವಾನಿಸಲಾಗಿದೆ. ಆಸ್ಕರ್‌ ಸಮಿತಿಗೆ ಆಹ್ವಾನ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ನಟ ಸೂರ್ಯ ಆಗಿದ್ದಾರೆ. ಮಂಗಳವಾರ, ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 397 ಕಲಾವಿದರನ್ನು ʼಕ್ಲಾಸ್‌ ಆಫ್‌ 2022ʼ ರ ಭಾಗವಾಗಲು ಆಹ್ವಾನಿಸಿದೆ. ಅದರಲ್ಲಿ ಸೂರ್ಯ, ಕಾಜೊಲ್‌, ಕಾಗ್ತಿ ಸೇರಿದ್ದಾರೆ. ತಮಿಳು ನಟ […]

Advertisement

Wordpress Social Share Plugin powered by Ultimatelysocial