Crime News Today: ಆಮ್ಲೆಟ್ ಮಾರಾಟಗಾರನೊಬ್ಬ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆಮುಂಬೈ: ರಸ್ತೆ ಬದಿಯ ಸಣ್ಣ ಹೋಟೆಲ್ಗೆ ಹೋದ ಗ್ರಾಹಕನೊಬ್ಬ ಆಮ್ಲೆಟ್ ಆರ್ಡರ್ ಮಾಡಿದ.
ತನಗೆ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ಆತ ರೇಗಾಡಿದ್ದರಿಂದ ಕೋಪಗೊಂಡ ಆ ಅಂಗಡಿಯ ಮಾಲೀಕ ಆ ಗ್ರಾಹಕನ ತಲೆಗೆ ಬಿಸಿಯಾದ ಬಾಣಲೆಯಿಂದ ಹೊಡೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಆಮ್ಲೆಟ್ ಮಾರಾಟಗಾರನೊಬ್ಬ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಸಿತಾಬುಲ್ಡಿ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ತನ್ನ ಗ್ರಾಹಕನಿಗೆ ಬಾಣಲಿಯಿಂದ ಹೊಡೆದ ಆರೋಪಿಯನ್ನು ವಿನೋದ್ ರಾಥೋಡ್ (48) ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ಅಮರಾವತಿ ನಿವಾಸಿ ಸಂದೀಪ್ ಸಾಯರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ ಮುಖವನ್ನು ಸುಟ್ಟುಕೊಂಡಿದ್ದಾನೆ. ದೆಹಲಿಯ ಕಾರಾವಾಲ್ ನಗರದ ಈ ವ್ಯಕ್ತಿಯನ್ನು ಗಾರೆ ಕೆಲಸದಾತನನ್ನು ಕೊಂದ ಆಪಾದನೆ ಮೇಲೆ ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆಪಾದನೆ ಮೇಲೆ ಆತನ ಪತ್ನಿಯನ್ನೂ ಸಹ ಬಂಧಿಸಲಾಗಿದೆ. ಆಪಾದಿತ ದಂಪತಿಯನ್ನು ಸುಧೇಶ್ ಕುಮಾರ್ ಹಾಗೂ ಆತನ ಪತ್ನಿ […]