ಪ್ರಾಣಿಗಳಿಗೆ ಹಿಂಸಿಸುವುದು ಅಪರಾಧ ಡಾ. ಸಿರಾಜುದ್ದೀನ್ ಅವಟೆ.

 

ಪ್ರಾಣಿಗಳಿಗೆ ಹಿಂಸಿಸುವುದು, ಹೊಡೆಯುವುದು, ಒದೆಯುವುದು ಮುಂತಾದ ಕಾರ್ಯಗಳಿಗೆ ಮುಂಧಾದಲ್ಲಿ ಕಾನೂನಿನ ಪ್ರಕಾರ ಅವುಗಳೆಲ್ಲವೂ ಅಪರಾಧಗಳನ್ನಾಗಿ ಗುರುತಿಸಿ ದಂಡ ಹಾಗೂ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ. ಸಿರಾಜುದ್ದೀನ್ ಅವಟೆ ಅವರು ಎಚ್ಚರಿಸಿದರು.ನಗರದ ಕೇಂದ್ರ ಕಾರಾಗೃಹದಲ್ಲಿನ ಸಿಬ್ಬಂದಿ ವರ್ಗ ಹಾಗೂ ಬಂದಿಗಳಿಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪ್ರಾಣಿ ದಯಾ ಸಂಘದ ವತಿಯಿಂದ ಹಮ್ಮಿಕೊಂಡ ಪ್ರಾಣಿ ಹಿಂಸೆ ತಡೆ ಕಾಯ್ದೆ ಅರಿವು ಹಾಗೂ ಅವುಗಳ ಸಂರಕ್ಷಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಜೀವಿ ಸಂಕುಲಗಳಿಗೆ ಈ ಭೂಮಿಯ ಮೇಲೆ ಬದುಕುವುದಕ್ಕೆ ಸಮಾನವಾದ ಹಕ್ಕುಗಳಿವೆ. ಹಾಗಾಗಿ ಪ್ರಾಣಿಗಳಿಗೆ ಹಿಂಸಿಸುವುದು ಅಪರಾಧವಾಗುತ್ತದೆ ಎಂದರು.ತರಬೇತಿಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಸಂರಕ್ಷಣೆ ಬಗ್ಗೆ ವಿವರವಾದ ಮಾಹಿತಿಗಳನ್ನು ಒದಗಿಸಲಾಗುವುದು. ಅದಕ್ಕನುಗುಣವಾಗಿ ತಾವುಗಳು ನಡೆದು ಇತರರಿಗೆ ತಿಳಿಸುವಂತಹ ಪ್ರಯತ್ನ ಮಾಡಬೇಕೆಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಬಂದಿಗಳಿಗೆ ಹೈನುಗಾರಿಕೆಯ ಬಗ್ಗೆ ತರಬೇತಿಯನ್ನು ನೀಡಲಾಗುವುದು ಎಂದರು.ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಯಲ್ಲಪ್ಪ ಎಸ್. ಇಂಗಳೆ ಅವರು ಉಪನ್ಯಾಸ ನೀಡಿ, ಪ್ರಸ್ತುತ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರ ಸೆಕ್ಷನ್ 11 (1) ಅಡಿಯಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು, ಉದ್ದೇಶಪೂರ್ವಕವಾಗಿ ಮತ್ತು ಅಸಮಂಜಸವಾಗಿ ಹಾನಿಯನ್ನುಂಟು ಮಾಡುವುದು ಪ್ರಾಣಿಗಳನ್ನು ಕಾಳಗಕ್ಕಾಗಿ ಉಪಯೋಗಿಸುವುದು, ಜಾನುವಾರಗಳ ಕೊಂಬನ್ನು ಕತ್ತರಿಸುವುದು, ಹಸುವಿನಿಂದ ಬಳಲಿಸುವುದು ಇವೆಲ್ಲವುಗಳ ಸೆಕ್ಷನ್ 11(1)ರಡಿ ಬರುತ್ತದೆಂದು ಹೇಳಿದರು.ಕಳೆದ ಕೆಲವು ವರ್ಷಗಳಿಂದ ಮನುಷ್ಯ ನಿರಂತರವಾಗಿ ಪ್ರಕೃತಿಯನ್ನು ನಾಶಮಾಡುತ್ತಿದ್ದಾನೆ. ಈ ಕಾರಣಕ್ಕಾಗಿ ಪ್ರಸ್ತುತ ಭಾರತದಲ್ಲಿ 20% ಸಸ್ತನಿ ಪ್ರಾಣಿಗಳು ಮತ್ತು 100% ಸಸಿ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಇದು ನಮಗೆ ತುಂಬಾ ಸವಾಲಿನ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಇಂದು ವನ್ಯ ಜೀವಿಗಳನ್ನು ಸಂರಕ್ಷಿಸುವುದು ನಮಗೆ ಬಹಳ ಮುಖ್ಯವಾಗಿದೆ. ಏಕೆಂದರೆ ನಾವು ವನ್ಯ ಜೀವಿಗಳನ್ನು ಸಂರಕ್ಷಿಸದಿದ್ದರೆ ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ದುಷ್ಪರಿಣಾಮವನ್ನು ಮನುಷ್ಯರಾದ ನಾವೇ ಅನುಭವಿಸಬೆಕಾಗುತ್ತದೆ. ಈ ಭೂಮಿಯಲ್ಲಿ ಮನುಷ್ಯ ಮತ್ತು ಇತರೇ ಜೀವಿಗಳಿಗೆ ಸಮಾನ ಹಕ್ಕುಗಳಿವೆ ಎಂಬುವದನ್ನು ಗೋಡೆಯ ಮೇಲೆ ಸ್ಕ್ರೀನ್ (ಪ್ರಾಜೆಕ್ಟರ್)ಗಳ ಮುಖಾಂತರ ಅವರು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಬಿ.ಎಂ. ಕೊಟ್ರೇಶ್ ಅವರು ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ನಿಸರ್ಗದ ಆರಾಧಕನಾಗಿರಬೇಕು. ಭಾರತಿಯರು ಅನಾದಿಕಾಲದಿಂದಲೂ ಪ್ರಕೃತಿಯನ್ನು ಸಂರಕ್ಷಿಸುತ್ತಾ ಬಂದಿದ್ದಾರೆ. ಪ್ರಾಣಿ ಪಕ್ಷಿ ಸಸ್ಯ ಪ್ರಭೇದಗಳು ನಮ್ಮ ಸಂಸ್ಕøತಿಯಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪ್ರಾಣಿಗಳು ಮನುಷ್ಯರ ಜೊತೆಗಿನ ಹತ್ತಿರದ ಸಂಬಂಧÀವನ್ನು ಹಲವು ಸನ್ನಿವೇಶಗಳಲ್ಲಿ ನಾವು ನೋಡಬಹುದು ಎಂದು ಹೇಳಿದ ಅವರು, ಈ ಕುರಿತಂತೆ ರಾಮಾಯಣ ಮತ್ತು ಮಹಾಭಾರತದ ನಿದರ್ಶನಗಳನ್ನು ಉಲ್ಲೇಖಿಸಿದರು.ದೇವ-ದೇವತೆಯರು ಸಹ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದಿರುವ ಭವ್ಯ ಪರಂಪರೆ ನಮ್ಮದು. ನಮ್ಮ ಸಂಸ್ಕøತಿಯಲ್ಲಿ ಹಸುವಿನ ಪಾತ್ರ ಬಹುದೊಡ್ಡದು. ಪ್ರಕೃತಿಯಲ್ಲಿಯ ಜೀವರಾಶಿಗಳನ್ನು ನಮ್ಮಿಂದ ಪ್ರತ್ಯೇಕಗೊಳಿಸಿ ಬದುಕುವುದು ಕಪ್ಪೆ, ನರಿ, ಹುಲಿ, ಪ್ರಾಣಿಗಳು ಕೂಡ ನಡೆಯುತ್ತವೆ. ಹಾಗಾಗಿ ಪ್ರಕೃತಿಯಲ್ಲಿಯ ನೈಸರ್ಗಿಕ ಸಂಪತ್ತು ಜೀವರಾಶಿಗಳನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ವೈಜನಾಥ್ ಮಮ್ಮಣಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸುಭಾಷಚಂದ್ರ ಟಕ್ಕಳಕಿ, ಡಾ. ದೇವಿಂದ್ರ ಬಿರಾದಾರ್, ಕಾರಾಗೃಹದ ಸಹಾಯಕ ಅಧೀಕ್ಷಕ ಹುಸೇನ್ ಪೀರ್, ಜೈಲರಾದ ಶ್ರೀಮತಿ ಸುನಂದಾ ವಿ., ಪಶು ಪರಿವೀಕ್ಷಕ ಮೀರ್ ಮಂಜುರ್ ಅಲಿಖಾನ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು 150 ಜನ ಸಿಬ್ಬಂದಿಗಳು, ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ನಾಗರಾಜ್ ಮೂಲಗೆ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಹಾದೇವಿ ಅವರು ಸ್ವಾಗತಿಸಿದರು. ವಿಚಾರಣಾ ಬಂದಿ ಪ್ರಾರ್ಥನಾಗೀತೆ ಹಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ?

Fri Mar 3 , 2023
ನಿದ್ರೆ ಎನ್ನುವುದು ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಾವು ಆರೋಗ್ಯವಾಗಿರಬೇಕಾದರೆ ಸರಿಯಾದ ನಿದ್ರೆಯ ಅವಶ್ಯಕತೆ ತುಂಬಾನೇ ಇದೆ. ಕೆಲವೊಂದು ಬಾರಿ ನಾವು ನಿದ್ರಾಹೀನತೆಯ ಸಮಸ್ಯೆಯನ್ನು ಅನುಭವಿಸುತ್ತೇವೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನ ಶೈಲಿ. ಹೌದು, ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನ ಶೈಲಿ ಉತ್ತಮವಾಗಿದ್ದಾಗ ಮಾತ್ರ ನಮ್ಮ ನಿದ್ರಾಚಕ್ರವು ಸರಿಯಾಗಿರುತ್ತದೆ. ಹಾಗಾದ್ರೆ ಮಲಗುವ ಮೊದಲು ನಾವು ಎಂತಹ ಆಹಾರವನ್ನು ಸೇವಿಸಬೇಕು? ಯಾವ ರೀತಿಯ ಆಹಾರವು ನಮಗೆ ನೈಸರ್ಗಿಕ ನಿದ್ರೆಗೆ […]

Advertisement

Wordpress Social Share Plugin powered by Ultimatelysocial