ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಸೋಮವಾರ ಆರೋಪ ಮಾಡಿದ್ದರು!

ನವದೆಹಲಿ: ಕೊರೊನಾವೈರಸ್‌ನ ಮೊದಲ ಅಲೆ ಸಂದರ್ಭದಲ್ಲಿ ದೆಹಲಿ ಸರ್ಕಾರವು, ವಲಸೆ ಕಾರ್ಮಿಕರು ರಾಷ್ಟ್ರ ರಾಜಧಾನಿಯಿಂದ ಹೊರನಡೆಯುವಂತೆ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಸೋಮವಾರ ಆರೋಪ ಮಾಡಿದ್ದರು. ಈ ಹೇಳಿಕೆಯನ್ನು ಅಲ್ಲಗಳೆದಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪ್ರಧಾನಿ ಹೇಳಿಕೆಯು ‘ಸಂಪೂರ್ಣ ಸುಳ್ಳು’ ಎಂದು ಖಂಡಿಸಿದ್ದಾರೆ.ಮುಂದುವರಿದು, ವಲಸಿಗರಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕತ್ತರಿಸಲಾಗಿತ್ತು. ಮಲಗಿದ್ದವರನ್ನೆಲ್ಲ ಎಬ್ಬಿಸಿ, ಬಸ್ಸುಗಳಲ್ಲಿ ಉತ್ತರ ಪ್ರದೇಶದ ಗಡಿಗೆ ತಂದು ಬಿಡಲಾಯಿತು ಎಂದು ಆರೋಪಿಸಿದ್ದಾರೆ.’ಕೇಳಿಸಿಕೊಳ್ಳಿ ಕೇಜ್ರಿವಾಲ್, ಕೋವಿಡ್ ಪ್ರಭಾವದಿಂದ ಇಡೀ ಮನುಕುಲವೇ ತತ್ತರಿಸಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾರ್ಮಿಕರನ್ನು ದೆಹಲಿಯಿಂದ ಹೊರನಡೆಯುವಂತೆ ಬಲವಂತ ಮಾಡಿದ್ದೀರಿ. ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು ಮಧ್ಯರಾತ್ರಿ ವೇಳೆ ಉತ್ತರ ಪ್ರದೇಶ ಗಡಿಯಲ್ಲಿ ಅಸಹಾಯಕವಾಗಿ ಬಿಟ್ಟುಹೋಗುವಂತಹ ಪ್ರಜಾಸತ್ತಾತ್ಮಕವಲ್ಲದ ಮತ್ತು ಅಮಾನವೀಯ ಕೃತ್ಯವನ್ನು ನಿಮ್ಮ ಸರ್ಕಾರ ನಡೆಸಿದೆ. ನಿಮ್ಮನ್ನು ಮಾನವೀಯತೆಯ ವಿರೋಧಿ ಎಂದು ಕರೆಯೋಣವೇ ಅಥವಾ..’ ಎಂದು ಪ್ರಶ್ನಿಸಿದ್ದಾರೆ.ಇದಾದ ಕೆಲವೇ ಹೊತ್ತಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಹೇಳಿಕೆಯನ್ನು ಟೀಕಿಸುವುದು ಖಂಡನೀಯ. ಕೇಜ್ರಿವಾಲ್ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.ಬಳಿಕ ಕೇಜ್ರಿವಾಲ್ ಮತ್ತು ಯೋಗಿ, ಟ್ವಿಟರ್‌ನಲ್ಲಿ ಪರಸ್ಪರ ಟೀಕಾಪ್ರಹಾರ ನಡೆಸಿದ್ದಾರೆ.’ಕೇಜ್ರಿವಾಲ್ ಅವರಿಗೆ ಸುಳ್ಳು ಹೇಳುವ ಜಾಣ್ಮೆ ಇದೆ. ಕೊವಿಡ್‌ನಂತಹ ಜಾಗತಿಕ ಪಿಡುಗಿನ ವಿರುದ್ಧ ಗೌರವಾನ್ವಿತ ಪ್ರಧಾನಿಯವರ ನೇತೃತ್ವದಲ್ಲಿ ಇಡೀ ದೇಶವೇ ಹೋರಾಟ ನಡೆಸುತ್ತಿದ್ದಾಗ, ಕೇಜ್ರಿವಾಲ್ ಅವರು ವಲಸೆ ಕಾರ್ಮಿಕರಿಗೆ ದೆಹಲಿಯಿಂದ ಹೊರನಡೆಯುವ ದಾರಿ ತೋರುತ್ತಿದ್ದರು’ ಎಂದು ಯೋಗಿ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವ ಯಾವ ಜಿಲ್ಲೆಗೆ ಹಿಜಾಬ್‌-ಕೇಸರಿ ಶಾಲು ವಿವಾದ ಗದ್ದಲ ಉಂಟುಮಾಡಿದೆ.

Tue Feb 8 , 2022
ದೆಹಲಿ, ಫೆಬ್ರವರಿ 8: ಉಡುಪಿಯಲ್ಲಿ ಶುರುವಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇದೀಗ ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ.ಹಿಜಾಬ್ ವಿಚಾರ ಇದೀಗ ರಾಜ್ಯಸಭೆಯಲ್ಲೂ ಗದ್ದಲ ಉಂಟು ಮಾಡಿದೆ, ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿರುವುದು ಅವರ ಹಕ್ಕಿಗೆ ಧಕ್ಕೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಹೇಳಿದ್ದಾರೆ.ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.ಸರ್ಕಾರ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಿ ಆದೇಶ ನೀಡಿದೆ. ಅಲ್ಲದೆ, ಹಿಜಾಬ್ ವಿವಾದ ಹೈಕೋರ್ಟ್ ಅಂಗಳದಲ್ಲಿದೆ. ಈ ಮಧ್ಯೆ ಉಡುಪಿಯಲ್ಲಿ ಆರಂಭವಾದ […]

Advertisement

Wordpress Social Share Plugin powered by Ultimatelysocial