ಖಾಸಗಿ ಸಂದರ್ಶನದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಮಂದಿರ ಹಾಗೂ ಮಸೀದಿಗಳಲ್ಲಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಬಗದಲ್ ಹಾಗೂ ನಿರ್ಣಾ ಗ್ರಾಮದಲ್ಲಿ ಹಿಂದು , ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು .ಗ್ರಾಮದ ಪ್ರಮುಖ ರಸ್ತೆಗಳಲ್ಲಿ
ಪ್ರತಿಭಟನೆ ನಡೆಸಿದ ಮಧ್ಯ ಮಾರಾಟ ವಿಚಾರಿಕ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿರುವುದರಿಂದ ಪ್ರತಿಭಟನಾಕಾರರು ಪವಿತ್ರ ಧಾರ್ಮಿಕ ಸ್ಥಳಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖೇಣಿ ವಿರುದ್ಧ ಘೋಷಣೆ ಕೂಗಿದರು . ಖೇಣಿಯನ್ನು ಸಾಮಾಜಿಕ ಬಹಿಷ್ಕಾರ ಹಾಕಿ ಗಡಿಪಾರ್ ಮಾಡುವಂತೆ ಆಗ್ರಹಿಸಿದರು.ಖೇಣಿಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಭಾವಚಿತ್ರವನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://play.google.com/store/apps/details?id=com.speed.newskannada