ದಶಕದ ಹಿಂದೆ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಸಿನಿಮಾ ಮೂಲಕ ನಟಿ ಸಮಂತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ. ಏಕಕಾಲಕ್ಕೆ ಈ ಸಿನಿಮಾ ತಮಿಳಿನಲ್ಲಿ ‘ವಿನೈತಾಂಡಿ ವರುವಾಯ’ ಹೆಸರಿನಲ್ಲಿ ತಮಿನಿನಲ್ಲೂ ತೆರೆಕಂಡು ಸಕ್ಸಸ್ ಕಂಡಿತ್ತು. ಕಾಲಿವುಡ್ನಲ್ಲಿ ಸಿಂಬು, ತ್ರಿಷಾ ಲೀಡ್ ರೋಲ್ಗಳಲ್ಲಿ ಮಿಂಚಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಗುಸುಗುಸು […]
ಸ್ಯಾಂಡಲ್ವುಡ್ ನಟಿ ಧನ್ಯಾ ಬಾಲಕೃಷ್ಣ ಸದ್ದಿಲ್ಲದೇ ತಮಿಳು ನಿರ್ದೇಶಕರೊಬ್ಬರನ್ನ ವಿವಾಹವಾಗಿದ್ದಾರೆ. `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ ಅವರು ಬಾಲಾಜಿ ಮೋಹನ್ ಎಂಬವರ ಜೊತೆಗೆ ಹಸೆಮಣೆ ಏರಿದ್ದಾರೆ. ಇದೀಗ ಇವರ ವಿವಾಹ ಸುದ್ದಿ ವೈರಲ್ ಆಗಿದೆ. ಧನ್ಯಾ ಬಾಲಕೃಷ್ಣ ಅವರನ್ನು ವಿವಾಹವಾದ ಬಾಲಾಜಿ ಮೋಹನ್ ತಮಿಳಿನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ಮಾರಿ’, ‘ಮಾರಿ 2’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ಅಂದಹಾಗೆಯೇ, ಧನ್ಯಾ […]
ರಿಮೇಕ್ ಮಾಡಿ ಗೆದ್ದವರು ಹಾಗೂ ದೊಡ್ಡ ಮಟ್ಟದ ಹೆಸರು ಮಾಡಿದ ಹಲವಾರು ನಟ ಹಾಗೂ ನಿರ್ದೇಶಕರ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿಯೇ ಇದೆ. ಬೇರೆ ಭಾಷೆಗಳಲ್ಲಿ ಹಿಟ್ ಆದ ಚಿತ್ರಗಳ ಹಕ್ಕನ್ನು ಪಡೆದು ಅದನ್ನು ಯಥಾವತ್ತಾಗಿ ಚಿತ್ರೀಕರಿಸುವ ರೂಢಿ ಕನ್ನಡ ಚಿತ್ರರಂಗದಲ್ಲಿ ಡಬಿಂಗ್ ಇಲ್ಲದೇ ಇರುವ ಕಾರಣದಿಂದಾಗಿ ತುಸು ಹೆಚ್ಚಾಗಿಯೇ ಇತ್ತು. ಇನ್ನು ಈ ರಿಮೇಕ್ ಚಿತ್ರಗಳನ್ನು ನೋಡಲು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದರು. ಹೀಗೆ ರಿಮೇಕ್ […]
ರಶ್ಮಿಕಾ ಮಂದಣ್ಣ ವಿವಾದದಲ್ಲಿ ಸಿಕ್ಕಿಕೊಳ್ಳೋದು ಹೊಸತೇನೂ ಅಲ್ಲ. ಏನಾದರೂ ಒಂದು ಹೇಳಿಕೆ ಕೊಟ್ಟು ಪೇಚಿಗೆ ಸಿಲುಕುತ್ತಾರೆ. ಈಗ ನ್ಯಾಷನಲ್ ಕ್ರಶ್ ಕೊಟ್ಟ ಹೇಳಿಕೆಯೊಂದು ದಕ್ಷಿಣ ಭಾರತದ ಸಿನಿಮಾ ಮಂದಿಯ ಕೋಪಕ್ಕೆ ಕಾರಣವಾಗಿದೆ.ರಶ್ಮಿಕಾ ಮಂದಣ್ಣ ತನ್ನ ಬಾಲಿವುಡ್ ಸಿನಿಮಾ ‘ಮಿಷನ್ ಮಜ್ನು’ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ಕೊಟ್ಟ ಹೇಳಿಕೆ ಹಲವರ ನಿದ್ದೆ ಕೆಡಿಸಿದೆ.ಈ ಕಾರ್ಯಕ್ರಮದಲ್ಲಿ “ಬಾಲಿವುಡ್ ಸಿನಿಮಾ ಹಾಡು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತವೆ. ಅದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾಸ್ […]
ರಾಕಿಂಗ್ ಸ್ಟಾರ್ ಯಶ್ ಟೀಂ ಇಂಡಿಯಾದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂತಸದ ಕ್ಷಣವನ್ನು ಹಾರ್ದಿಕ್ ಪಾಂಡ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ.ಹಾರ್ದಿಕ್ ಪಾಂಡ್ಯ ಅವರು ನಟ ಯಶ್ ಅವರನ್ನು ತಬ್ಬಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಹೋದರರು ರಾಕಿ ಬಾಯ್ ಜೊತೆಗೆ ನಿಂತು ಪೋಸು ನೀಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.ಸದ್ಯ ಯಶ್ […]
ಬೀಜಿಂಗ್: ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಚೀನದ ಆಸ್ಪತ್ರೆ ಗಳಲ್ಲಿ ಔಷಧಗಳ ಕೊರತೆಯೂ ಉಂಟಾ ಗಿದೆ. ಹೀಗಾಗಿ ಅದು ಭಾರ ತದ ಮುಂದೆಯೇ ಮಂಡಿಯೂ ರಿದೆ. ಆದರೆ ರಹಸ್ಯವಾಗಿ ಬ್ಲ್ಯಾಕ್ ಮಾರು ಕಟ್ಟೆಯಲ್ಲಿ ಔಷಧಗಳನ್ನು ತರಿಸಿಕೊಳ್ಳಲು ಮುಂದಾಗಿದೆ. ಆ ದೇಶದ ಸರಕಾರ ದಿಂದ ಮಾನ್ಯತೆ ಪಡೆದ ಔಷಧಗಳು ಸೀಮಿತ ಪ್ರಮಾಣದಲ್ಲಿ ಲಭ್ಯ ವಾಗುತ್ತಿದೆ. ಲಭ್ಯವಾಗುತ್ತಿದ್ದರೂ ಅವು ಗಳ ಬೆಲೆ ದುಬಾರಿಯಾಗಿಯೂ ಇದೆ. ಹೀಗಾಗಿ ಅನಿವಾರ್ಯವಾಗಿ ಆಸ್ಪತ್ರೆ ಗಳು ಮತ್ತು ವೈದ್ಯರು ಕಳ್ಳತನದ ಮಾರ್ಗದ ಮೂಲಕ ಭಾರತದಿಂದ ಔಷಧಗಳನ್ನು ತರಿಸಿಕೊಳ್ಳುತ್ತಿದ್ದಾರೆ. […]
ಭಾರತದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಮಡಚಬಹುದಾದ 8 ಅಡಿಯಿಂದ 8 ಅಡಿಗಳ ಸ್ಟೋರ್ ಅನ್ನು ಪ್ರಾರಂಭಿಸಲಾಗಿದೆ. ಇದು ಒಂದು ರೀತಿಯ ಕಿಯೋಸ್ಕ್ ಆಗಿದ್ದು, ಈವೆಂಟ್ಗಳಿಗಾಗಿ ನಿರ್ದಿಷ್ಟ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಹೊರಾಂಗಣ ಸೆಟ್ಟಿಂಗ್ ಅಥವಾ ಮಾಲ್ನಲ್ಲಿ ಇದನ್ನು ಬಳಸಬಹುದಾಗಿದ್ದು ಇದರ ವಿಡಿಯೋ ವೈರಲ್ ಆಗಿದೆ.ಕಿಯೋಸ್ಕ್ ಎಲ್ಇಡಿ ದೀಪಗಳೊಂದಿಗೆ ನೆಲ ಮತ್ತು ಛಾವಣಿಯೊಂದಿಗೆ ಬರುತ್ತದೆ ಮತ್ತು ಎಲ್ಲಾ ಕಡೆಗಳಲ್ಲಿ ಬ್ಯಾಕ್ಲಿಟ್ ಲೋಗೋ ಬ್ರ್ಯಾಂಡಿಂಗ್ ಹೊಂದಿದೆ. ಈ ಉತ್ಪನ್ನವನ್ನು ಅಮಿಟೋಜೆ ಇಂಡಿಯಾ […]
ನವದೆಹಲಿ: ಎಸ್.ಎಸ್.ರಾಜಮೌಳಿ ಅವರ “ಆರ್ ಆರ್ ಆರ್” ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಏತನ್ಮಧ್ಯೆ ಆರ್ ಆರ್ ಆರ್ ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿರುವ ಸಂದರ್ಭದಲ್ಲಿ ಗೇಮ್ ಆಫ್ ಥ್ರೋನ್ಸ್ ನಟಿ ನತಾಲೈ ಎಮಾನ್ಯುಯೆಲ್ ಅಪಸ್ವರ ಎತ್ತಿದ್ದಾರೆ. “ಆರ್ ಆರ್ ಆರ್” ಅನಾರೋಗ್ಯಕರ ಸಿನಿಮಾ ಎಂದು ನತಾಲೈ ಟ್ವೀಟ್ ಮಾಡಿದ್ದು, ಬಳಿಕ ಕೂಡಲೇ ನಾನು ಆ ಶಬ್ದ(Sick)ವನ್ನು ಹೊಗಳಿಕೆಯ ಅರ್ಥದಲ್ಲಿ ಬಳಸಿರುವುದಾಗಿ ಸಮಜಾಯಿಷಿ ನೀಡಿರುವುದಾಗಿ ವರದಿ […]
ಬೆಳಗಾವಿ : ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಲಿದೆ. ಬೆಳಗಾವಿ ಚಳಿಗಾಲದ ಅಧಿವೇಶನ ಇಂದೇ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ನಿಗದಿತ ಅವಧಿಗಿಂತ ಒಂದು ದಿನ […]
ನವದೆಹಲಿ : 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸಂಘಟಿತ ಕಾರ್ಮಿಕರಿಗೆ ಉತ್ತಮ ಭವಿಷ್ಯವನ್ನ ಒದಗಿಸುವ ಉದ್ದೇಶದಿಂದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯನ್ನ ಜಾರಿಗೆ ತಂದಿದೆ.ಸರ್ಕಾರದ ಈ ಪಿಂಚಣಿ ಯೋಜನೆಯು ಆ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವನ್ನ ನೀಡುತ್ತದೆ. ಇದು ಅವರ ಭವಿಷ್ಯವನ್ನ ಆರ್ಥಿಕವಾಗಿ, ಬಲವಾಗಿ ಮತ್ತು ಸುಭದ್ರವಾಗಿಸುತ್ತದೆ.ಈ ಯೋಜನೆಯಡಿ, ಕೇಂದ್ರ ಸರ್ಕಾರವು 60 ವರ್ಷ ವಯಸ್ಸಿನ […]