ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಕಾಶ್ಮೀರಿ ಫೈಲ್ಸ್(Kashmiri Files) ಚಿತ್ರದ ಕುರಿತು ಚರ್ಚಿಸಿದರು. ಸಂಸದೀಯ ಪಕ್ಷವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಇಂತಹ ಚಿತ್ರಗಳಿಂದ ಸತ್ಯ ಹೊರ ಬರುತ್ತೆ.ಕಾಶ್ಮೀರಿ ಫೈಲ್ಸ್ ಚಿತ್ರದ ಬಗ್ಗೆ ಚರ್ಚೆ ನಡೆಯಬೇಕು. ವರ್ಷಗಳ ಕಾಲ ಸತ್ಯವನ್ನ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ಸರಿಯಾದ ಇತಿಹಾಸವನ್ನ ಮುನ್ನೆಲೆಗೆ ತರುವುದು ಮುಖ್ಯ. ಚಿತ್ರದ ಬಗ್ಗೆ ಷಡ್ಯಂತ್ರಗಳು ನಡೆಯುತ್ತಿರುವುದು ನಿಜ. ಆದ್ರೆ, ಸತ್ಯವನ್ನ ಬಹಿರಂಗಪಡಿಸುವ ಧೈರ್ಯವನ್ನ ಮೆಚ್ಚಲೇಬೇಕು’ ಎಂದು ಮೋದಿ ಹೇಳಿದರು.ಅಂತಹ ಚಿತ್ರಗಳಿಂದ ಸತ್ಯ ಹೊರ ಬರುತ್ತದೆ ಮತ್ತು ಅದನ್ನ ಇಷ್ಟಪಡದವರನ್ನ ಮತ್ತೊಂದು ದೃಷ್ಟಿಕೋನದಿಂದ ಮತ್ತೊಂದು ಚಿತ್ರ ಮಾಡುವುದನ್ನ ಯಾರು ತಡೆಯುತ್ತಾರೆ? ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಇದೇ ವೇಳೆ ತುರ್ತು ಪರಿಸ್ಥಿತಿಯ ಬಗ್ಗೆ ಅವರು ಹಿಂದಿನ ಸರ್ಕಾರಗಳನ್ನ ಮತ್ತು ವಿಶೇಷವಾಗಿ ಕಾಂಗ್ರೆಸ್ ಅನ್ನು ಟೀಕಿಸಿದರು. ತುರ್ತು ಪರಿಸ್ಥಿತಿಯ ಸತ್ಯವನ್ನ ಮರೆಮಾಚುವ ಪ್ರಯತ್ನ ನಡೆದಿದೆ, ಸತ್ಯವನ್ನ ಹತ್ತಿಕ್ಕಲಾಯಿತು ಎಂದು ಕಿಡಿಕಾರಿದ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada