ಮಹಾಶಿವರಾತ್ರಿ ಹಿನ್ನೆಲೆ..
ನಾಲ್ಕೈದು ಅಡಿ ನೀರಿನ ಮಧ್ಯೆಯೂ ಮಧ್ಯರಾತ್ರಿ ಸಂಗಮನಾಥನಿಗೆ ವಿಶೇಷ ಪೂಜೆ, ಅಭಿಷೇಕ..
ಕಳ್ಳಕವಟಗಿ ಗ್ರಾಮದ ಸಂಗಮನಾಥನ ದೇಗುಲದ ಗರ್ಭಗುಡಿಯಲ್ಲಿ ಆವರಿಸಿದ ಹಳ್ಳದ ನೀರು..
ನೀರಿನ ಮಧ್ಯೆಯೂ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದ ಅರ್ಚಕರು,ಭಕ್ತರು…
ಹಳ್ಳದಂಚಿಗೆ ಇರುವ ಸಂಗಮನಾಥ ದೇಗುಲ….
ಹಳ್ಳಕ್ಕೆ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ನೀರು ಬಿಡುಗಡೆ…
ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳ, ಬಾಂದಾರಗಳು, ತುಂಬಿದ ಕೆರೆ ಕಟ್ಟೆಗಳು…
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥನ ದೇಗುಲ…
ಪ್ರತಿವರ್ಷವೂ ಶಿವರಾತ್ರಿ ದಿನ ಮಧ್ಯರಾತ್ರಿ 12ಕ್ಕೆ ಸಂಗಮನಾಥನಿಗೆ ಪೂಜೆ ಅಭಿಷೇಕ ಸಲ್ಲಿಸುವ ಸಂಪ್ರದಾಯ..
ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು ಇದ್ದರೂ ಸಂಗಮನಾಥನಿಗೆ ಹಾಲು, ಮೊಸರು, ತುಪ್ಪದಿಂದ ಅಭಿಷೇಕ ಸಲ್ಲಿಕೆ..
ಹಳ್ಳದ ದಂಡೆಯ ಮೇಲೆ ಭಜನಾ ಪದ ಹಾಡುಗಳ ಮೂಲಕ ಜಾಗರಣೆ ನಡೆಸಿದ್ದ ಭಕ್ತರು..
ಮೈದುಂಬಿ ಹರಿಯುತ್ತಿರೋ ಹಳ್ಳ….
ಜಲಪಾತ ವೈಭವ ಸೃಷ್ಟಿಸಿದ ಹಳ್ಳದ ನೀರು…
ಬೇಸಿಗೆಯ ಆರಂಭಕ್ಕೂ ಮುನ್ನವೇ ಮಳೆಗಾಲದ ವೈಭವ….
ಹಳ್ಳಕ್ಕೆ ನೀರು ಬಿಟ್ಟಿರೋದಕ್ಕೆ ಭಕ್ತರು, ರೈತರಲ್ಲಿ ಸಂತಸ..
ಕೃಷ್ಣೆಯ ನೀರಿನಿಂದ ಸಂಗಮನಾಥನಿಗೆ ವಿಶೇಷ ಅಭೀಷೇಕ ಆಯಿತೆಂದು ಭಕ್ತರ ಸಂತಸ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada