ನಿಕೊಲಾಸ್ ಕೋಪರ್ನಿಕಸ್ ಖಗೋಳಶಾಸ್ತ್ರದ ಪಿತಾಮಹ.

ನಮ್ಮ ಜಗತ್ತಿಗೆ ಭೂಮಿ ಕೇಂದ್ರವಲ್ಲ, ಸೂರ್ಯನೇ ಕೇಂದ್ರ ಎಂಬ ವಾದವನ್ನು ಜನಗಳ ಮುಂದೆ ಮಂಡಿಸಿ, ಸ್ಥಾಪಿಸಿದ ವ್ಯಕ್ತಿಯೆಂದರೆ ನಿಕೊಲಾಸ್ ಕೋಪರ್ನಿಕಸ್.
ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ 1473ರ ಫೆಬ್ರುವರಿ 19ರಂದು ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಅದರಲ್ಲಿ ಪದವಿಯನ್ನೂ ಪಡೆದಿದ್ದರು. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ಅಂತಲೇ ಆತ ತಮ್ಮ ವ್ಯಾಸಂಗವನ್ನು ಬೊಲೊನ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ ಖಗೋಳ ಶಾಸ್ತ್ರ ಕಲಿತರು. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾದರು. ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು. ತುಂಬ ಕರುಣಾಮಯಿಯಾಗಿದ್ದ ಈತ ಬಡಬಗ್ಗರಿಗೆ ಪುಕ್ಕಟೆ ಔಷಧ ನೀಡುತ್ತಿದ್ದರು.ಆಕಾಶಕಾಯಗಳ ಚಲನೆಯನ್ನು ವಿವರಿಸಿದ ಕೋಪರ್ನಿಕಸ್, ಈ ವಿಶ್ವದ ನಟ್ಟನಡುವೆ ಸೂರ್ಯನು ಇದ್ದಾನೆ, ಅವನ ಸುತ್ತ ಭೂಮ್ಯಾದಿಗ್ರಹಗಳು ವೃತ್ತಾಕಾರದಲ್ಲಿ ಚಲಿಸುತ್ತಿವೆ ಎಂದು ಪ್ರತಿಪಾದಿಸಿದರು. ಆಧುನಿಕ ವಿಜ್ಞಾನದ ಜನಕರೆಂದು ಗೌರವಿಸಲ್ಪಡುವ ಕೋಪರ್ನಿಕಸ್ ಈ ಭೂಮಿಯು ಹೇಗೆ ಆಕಾಶಕಾಯಗಳಾದ ಚಂದ್ರ, ಸೂರ್ಯರೊಂದಿಗೆ ಹಾಗೂ ಸುತ್ತಮುತ್ತಲಿನ ಇತರ ಕಾಯಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ವಿವರಿಸಿದರು.ಕೋಪರ್ನಿಕಸ್ ತೋರಿಸಿದ ಪರಿಹಾರವನ್ನೂ ಪ್ರಾರಂಭದಲ್ಲಿ ಕೆಲವು ಚಿಂತಕರು ಅಷ್ಟಿಷ್ಟು ಊಹಿಸಿದ್ದುಂಟು. ಆದರೆ ಆ ಎಲ್ಲಾ ಊಹೆಗಳನ್ನೂ ಆಧಾರವಾಗಿಟ್ಟುಕೊಂಡು, ಪುರೋಹಿತಶಾಹಿ ಚರ್ಚಿನ ಮೌಢ್ಯದ ವಿರುದ್ಧ ಕೆಲಸ ಮಾಡಿದ್ದು ಕೋಪರ್ನಿಕಸ್ ಮಾತ್ರ. ಈತನ ಆಲೋಚನೆಗಳ ವಿರುದ್ಧ ದೀರ್ಘಕಾಲ ಧಾರ್ಮಿಕ ವಿರೋಧ ಇತ್ತು ಎನ್ನುವುದು ಗಮನಾರ್ಹ. ಈತ ತೀರಿಕೊಂಡ ಒಂದೂವರೆ ಶತಮಾನದ ನಂತರವೂ ಈತನ ‘ಸೂರ್ಯ ಕೇಂದ್ರವಾದ’ ಸರಿಯಾಗಿ ಬೆಳಕಿಗೆ ಬಂದಿರಲಿಲ್ಲ.ಮುಂದೆ ಕೆಪ್ಲರ್, ಗೆಲಿಲಿಯೋ, ನ್ಯೂಟನ್ ಅಂತಹ ವಿಜ್ಞಾನಿಗಳ ಸಂಶೋಧನೆಗಳು ಕಾಲಾನುಕಾಲಕ್ಕೆ ತೀವ್ರವಾದ ಸವಾಲುಗಳನ್ನು ಎದುರಿಸಿಯೂ ಕೋಪರ್ನಿಕಸ್ ಅವರ ಚಿಂತನೆಯನ್ನು ಆಧರಿಸಿ ಅವರ ಶ್ರೇಷ್ಠ ಚಿಂತನೆಯನ್ನು ಇಡೀ ಜಗತ್ತು ಒಪ್ಪುವಂತೆ ಮಾಡಿತು. ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡವನಿಗೆ ಯಾತರ ಭಯ? ಯಾವ ಮೌಢ್ಯವೇ ಆದರೂ ಸರಿ, ಸತ್ಯವನ್ನು ಎಷ್ಟು ಕಾಲ ತಾನೇ ಮುಚ್ಚಿಡಬಲ್ಲದು?ಕೋಪರ್ನಿಕಸ್ ಕ್ರಿಸ್ತ ಸನ್ಯಾಸಿಯೂ ಆಗಿದ್ದರು. ರೆವಲೂಷನ್ ಪುಸ್ತಕದಲ್ಲಿ ತಿಳಿದು ಬರುವಂತೆ ತ್ರಿಕೋನಮಿತಿಯನ್ನು ಹಲವು ವಿಧದಲ್ಲಿ ಬಳಸಿದ ಈತ ಶ್ರೇಷ್ಠ ಗಣಿತಜ್ಞ. ಈತ ಸರ್ವತೋಮುಖ ಪ್ರಜ್ಞೆಯ ವ್ಯಕ್ತಿಯೆಂದು, ಪುನರುತ್ಥಾನ ಕಾಲದ ಚಿಂತಕ ಬುದ್ಧಿಜೀವಿಗಳಲ್ಲಿ ಒಬ್ಬರೆಂದು ತಿಳಿಯಲಾಗಿದೆ. ಇವರಿಗೆ ಕನಿಷ್ಟ ಪೊಲಿಷ್, ಜರ್ಮನ್, ಲ್ಯಾಟಿನ್, ಗ್ರೀಕ್ ಭಾಷೆಗಳು ಬರುತ್ತಿದ್ದಿರಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ!

Sun Feb 19 , 2023
ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಓರ್ವ ಸ್ನೇಹಿತನಿಗೆ ಚಾಕು ಇರಿದ ಇಬ್ಬರು ಸ್ನೇಹಿತರು ಬಾಗಲಕೋಟೆ ವಿದ್ಯಾಗಿರಿಯಲ್ಲಿ ನಡೆದ ಘಟನೆ ಕೃಷ್ಣ ಚಂದ್ರಶೇಖರ ಹೇಳವರ (೨೦) ಚಾಕು ಇರಿತಕ್ಕೆ ಒಳಗಾಗಿರುವ ಯುವಕ ಚಾಕು ಇರಿತ ಮಾಡಿರುವ ಸ್ನೇಹಿತರಿಗಾಗಿ ಪೊಲೀಸರ ಶೋಧ ಕೃಷ್ಣ ಬೆನ್ನಿಗೆ, ಕೈ ಚಾಕು ಇರಿದಿರುವ ಸ್ನೇಹಿತರು ಆರೋಪಿ ಯುವಕರಾದ ಪ್ರಶಾಂತ್, ಪ್ರದೀಪ್ ಗಾಗಿ ಪೊಲೀಸರ ಶೋಧ ಬಿಸಿಎ ಮೊದಲ ವರ್ಷ ವ್ಯಾಸಂಗ ಮಾಡ್ತಿರೋ ಗಾಯಾಳು ಕೃಷ್ಣ ಗಾಯಾಳು […]

Advertisement

Wordpress Social Share Plugin powered by Ultimatelysocial