ನೆಲಮಂಗಲ: ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ವಿವರ್ಸ್ ಕಾಲನಿಯಲ್ಲಿ ನಡೆದಿದೆ.ತುಮಕೂರಿನ ಕುಣಿಗಲ್ ಮೂಲದ ಪೂಜಾ (22) ಮೃತ ದುರ್ದೈವಿ. ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣಗಳಲ್ಲಿ ಪೂಜಾ ನೇಣಿಗೆ ಶರಣಾಗಿದ್ದಾಳೆ.ಎರಡೂವರೆ ವರ್ಷದ ಹಿಂದೆ ಮಂಜುನಾಥ್ನೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ದಿನ ಕಳೆದಂತೆ ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾರಿಂದ ಕಿರುಕುಳ ಶುರುವಾಗಲು ಆರಂಭವಾಯಿತು.ಮದುವೆ ಬಳಿಕ ಮೊದಲ ಮಗು ಗರ್ಭಪಾತವಾಗಿತ್ತು. ಎರಡನೇ ಮಗು ಹುಟ್ಟಿದ 6 ತಿಂಗಳಲ್ಲೇ ಅದು ಮೃತಪಟ್ಟಿತು. ಇದೇ ನೆಪದಲ್ಲಿ ಪೂಜಾಳ ಅತ್ತೆ, ಆಕೆಯನ್ನು ಪಾಪದವಳು, ಅನಿಷ್ಟವೆಂದು ದಿನನಿತ್ಯ ನಿಂದಿಸುತ್ತಿದ್ದರು. ಇದರಿಂದ ಪೂಜಾ ಮಾನಸಿಕವಾಗಿ ಕುಗ್ಗಿದ್ದರು.ಇದೀಗ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada