ಬಾಡಿಗೆ ಮನೇಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣದಲ್ಲಿ ಸಾವಿನ ಹಾದಿ ಹಿಡಿದ ಗೃಹಿಣಿ: ಮನಕಲಕುತ್ತೆ ಈಕೆಯ ನೋವಿನ ಕತೆ

ನೆಲಮಂಗಲ: ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ವಿವರ್ಸ್ ಕಾಲನಿಯಲ್ಲಿ ನಡೆದಿದೆ.ತುಮಕೂರಿನ ಕುಣಿಗಲ್ ಮೂಲದ ಪೂಜಾ (22) ಮೃತ ದುರ್ದೈವಿ. ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣಗಳಲ್ಲಿ ಪೂಜಾ ನೇಣಿಗೆ ಶರಣಾಗಿದ್ದಾಳೆ.ಎರಡೂವರೆ ವರ್ಷದ ಹಿಂದೆ ಮಂಜುನಾಥ್​ನೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ದಿನ ಕಳೆದಂತೆ ಪತಿ ಮಂಜುನಾಥ್​ ಮತ್ತು ಅತ್ತೆ ಶ್ಯಾಮಲಾರಿಂದ ಕಿರುಕುಳ ಶುರುವಾಗಲು ಆರಂಭವಾಯಿತು.ಮದುವೆ ಬಳಿಕ ಮೊದಲ ಮಗು ಗರ್ಭಪಾತವಾಗಿತ್ತು. ಎರಡನೇ ಮಗು ಹುಟ್ಟಿದ 6 ತಿಂಗಳಲ್ಲೇ ಅದು ಮೃತಪಟ್ಟಿತು. ಇದೇ ನೆಪದಲ್ಲಿ ಪೂಜಾಳ ಅತ್ತೆ, ಆಕೆಯನ್ನು ಪಾಪದವಳು, ಅನಿಷ್ಟವೆಂದು ದಿನನಿತ್ಯ ನಿಂದಿಸುತ್ತಿದ್ದರು. ಇದರಿಂದ ಪೂಜಾ ಮಾನಸಿಕವಾಗಿ ಕುಗ್ಗಿದ್ದರು.ಇದೀಗ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಣ್ಣೆ ಬಿಡ್ತಿಲ್ಲ, ದುಡ್ಡು ಉಳಿತಿಲ್ಲ. ಹುಂಜಕ್ಕೆ ಒಂದೇ ಒಂದು ಪೆಗ್​ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಾಲೀಕ!

Sun Jun 5 , 2022
ಮುಂಬೈ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಹುಂಜವೊಂದರ ರಾಯಲ್​ ಜೀವನ ನೋಡಿದ್ರೆ ಎಲ್ಲರ ಹುಬ್ಬೇರುವುದು ಗ್ಯಾರೆಂಟಿ. ಈ ಹುಂಜಕ್ಕೆ ಲೋಕಲ್​ ಮದ್ಯ ಅಲ್ಲ ಫಾರೀನ್​ ಮದ್ಯವೇ ಜೀವ ಉಳಿಸುವ ಔಷಧಿಯಾಗಿದೆ. ಎಣ್ಣೆ ಇಲ್ಲ ಅಂದ್ರೆ ಈ ಹುಂಜ ನೀರು ಕೂಡ ಮುಟ್ಟಲ್ಲ.ಅಷ್ಟರಮಟ್ಟಿಗೆ ಈ ಹುಂಜ ಮದ್ಯ ವ್ಯಸನಿಯಾಗಿದೆ.ಹುಂಜ ಅದ್ಹೇಗೆ ಮದ್ಯದ ಅಮೇಲೇರಿಸಿಕೊಂಡಿತು ಎಂಬ ಎಲ್ಲರ ಕುತೂಹಲಕ್ಕೆ ಉತ್ತರ ಮುಂದಿದೆ. ಭಂಡಾರ ಜಿಲ್ಲೆಯ ಪಿಪರಿ ಗ್ರಾಮದ ನಿವಾಸಿ ಭಾವು ಕಟೋರೆ ತನ್ನ ಜೀವನದಲ್ಲಿ […]

Advertisement

Wordpress Social Share Plugin powered by Ultimatelysocial