ಬೆಂಗಳೂರು:  ಸೋಲು ತಪ್ಪಿಸಿಕೊಂಡ ಬುಲ್ಸ್

 

ಬೆಂಗಳೂರು: ದಬಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ತಂಡದ ನಾಯಕರ ಜಿದ್ದಾಜಿದ್ದಿಯ ಆಟದ ಫಲವಾಗಿ ಪ್ರೊ ಕಬಡ್ಡಿ ಪಂದ್ಯವು ರೋಚಕ ಟೈನಲ್ಲಿ ಮುಕ್ತಾಯವಾಯಿತು.ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪಂದ್ಯವು 36-36 ರಿಂದ ಟೈ ಆಯಿತು.ಬೆಂಗಳೂರು ತಂಡದ ನಾಯಕ ಪವನ್ ಶೆರಾವತ್ 17 ಮತ್ತು ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ 13 ಅಂಕಗಳನ್ನು ಗಳಿಸಿದರು. ಇಬ್ಬರೂ ರೇಡಿಂಗ್‌ನಲ್ಲಿ ಮಿಂಚಿದರು.ಅರ್ಧವಿರಾಮದ ವೇಳೆ ಡೆಲ್ಲಿ ತಂಡವು 18-14ರಿಂದ ಮುನ್ನಡೆಯಲ್ಲಿತ್ತು. ಆದರೆ ವಿರಾಮದ ನಂತರ ಪವನ್ ಮಿಂಚಿದರು. ಇದರಿಂದಾಗಿ ಎರಡನೇ ಅವಧಿಯಲ್ಲಿ ಬುಲ್ಸ್ ತಂಡವು 22 ಅಂಕಗಳನ್ನು ಗಳಿಸಿದರೆ, ಡೆಲ್ಲಿ ತಂಡವು 18 ಪಾಯಿಂಟ್ಸ್ ಪಡೆಯಿತು. ಇದರಿಂದಾಗಿ ತಂಡವು ಸೋಲು ತಪ್ಪಿಸಿಕೊಂಡಿತು.ಇನ್ನೊಂದು ಪಂದ್ಯದಲ್ಲಿ; ಹರಿಯಾಣ ಸ್ಟೀಲರ್ಸ್‌ ತಂಡವು 46-29 ರಿಂದ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಜಯಿಸಿದೆ. ಹರಿಯಾಣ ತಂಡದ ನಾಯಕ ವಿಕಾಶ್ ಖಂಡಾಲ 10 ಮತ್ತು ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ 13 ಅಂಕಗಳನ್ನು ಗಳಿಸಿದ್ದಾರೆ. ಹರಿಯಾಣ ತಂಡದ ರೇಡರ್ ಆಶಿಶ್ (6), ವಿನಯ್ (8) ಮತ್ತು ಡಿಫೆಂಡರ್ (3) ಮಿಂಚಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂದರೆ ಹೀಗೆ ಮಾಡಿ.

Sat Feb 5 , 2022
ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿ ಬರ್ತಿದೆ. ಅನೇಕರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಅನೇಕರು ಇದ್ರಲ್ಲಿ ಯಶಸ್ಸು ಕಾಣುವುದಿಲ್ಲ. ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರಿಗೆ ಈ ಪಾನೀಯಗಳು ಬೆಸ್ಟ್.ಓಂ ಕಾಳಿನ ನೀರನ್ನು ಕುಡಿಯುವುದ್ರಿಂದ ಬೊಜ್ಜು ಬೇಗ ಕಡಿಮೆಯಾಗುತ್ತದೆ. ಈ ನೀರನ್ನು ಆಹಾರ ಸೇವನೆ ಮಾಡಿದ ನಂತ್ರ ನಿಯಮಿತವಾಗಿ ಕುಡಿಯಬೇಕು. ವಾರದಲ್ಲಿ ನೀವೇ ಫಲಿತಾಂಶ ಕಾಣಬಲ್ಲಿರಿ.ದಾಲ್ಚಿನ್ನಿ ನೀರು ತೂಕ ಕಡಿಮೆ ಮಾಡಲು ಸಹಕಾರಿ. […]

Advertisement

Wordpress Social Share Plugin powered by Ultimatelysocial