ಕಲಘಟಗಿ: ತಾಲ್ಲೂಕಿನ ಬೇಗೂರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ತುಮರಿಕೊಪ್ಪ ಗ್ರಾಮದ ನಾಗವ್ವ ಜಂಬೂಲಿಂಗ ಅಂಗಡಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಅಶೋಕ ಮಿಕ್ಕಿತ ಹಾಗೂ ನಿಂಗಪ್ಪ ಇವರ ನಡುವೆ ಸ್ಪರ್ಧೆ ಇತ್ತು.
ಬಸವರಾಜ 16 ಮತ ಪಡೆದು ಆಯ್ಕೆಯಾದರು. ನಿಂಗಪ್ಪ ಅವರು 3 ಮತ ಪಡೆದರು.
ಇತ್ತೀಚೆಗೆ ಜರುಗಿದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 19 ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದರು. ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯತಿ ಇಒ ಎಸ್.ಎಂ. ಮಠಪತಿ, ಸಹಾಯಕ ಚುನಾವಣಾ ಅಧಿಕಾರಿ ರವೀಂದ್ರ ಅಲ್ಲಾಪುರ, ಪಿಡಿಒ ಎಸ್. ಎಫ್ ಗೌಳೇರ, ಕಂಪ್ಯೂಟರ್ ಆಪರೇಟರ್ ಪ್ರಭು ಅಂಗಡಿ ಚುನಾವಣಾ ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯತಿ ಸರ್ವ ಸದಸ್ಯರು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us:
Wed Feb 9 , 2022
ನವದೆಹಲಿ : ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹಿಜಾಬ್ ವಿವಾದದ ಕುರಿತಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ ನೀಡಿದ್ದು,ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ,ಬಟ್ಟೆ ಧರಿಸುವುದ ಹೆಣ್ಣು ಮಕ್ಕಳವಿವೇಚನೆಗೆ ಬಿಟ್ಟಿದ್ದು, ಅದು ಬಿಕಿನಿಯಾಗಿರಲಿ, ಜೀನ್ಸ್ ಅಥವಾ ಹಿಜಾಬ್ ಆಗಿರಲಿ.ಮಹಿಳೆ ಏನು ಧರಿಸಬೇಕು ಎಂಬದನ್ನು ನಿರ್ಧರಿಸುವ ಹಕ್ಕು ಮಹಿಳೆಯರಿಗೆ ಇದೆ. ಈ ಹಕ್ಕು ಭಾರತೀಯ ಸಂವಿಧಾನ ನೀಡಿದೆ. ಮೊದಲು […]