ಬೆಳಗಾವಿ : ಮೋಳೆ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಮಾಜ ಸೇವಾ ಸಂಘದ ವತಿಯಿಂದ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ 7.5% ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮಾಜದ ಮುಖಂಡರ ನೇತೃತ್ವದಲ್ಲಿ ಕಾಗವಾಡ ಚೆನ್ನಮ್ಮ ವೃತ್ತದಿಂದ ನೂರಾರು ಜನರು ಸೇರಿಕೊಂಡು ತಹಶಿಲ್ದಾರ ಕಚೇರಿವರಗೆ ಕಾಲ್ನಡಿಗೆಯ ಮೂಲಕ ತೆರಳಿ ತಹಶಿಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡ ರಮೇಶ ನಾಯಿಕ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟು ಜನಾಂಗದವರನ್ನು ಗುರುತಿಸಲಾಗಿದೆ. 2011ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ರಷ್ಟಿದೆ . ಪರಿಶಿಷ್ಟ ಪಂಗಡದವರು ಸುಮಾರು 7% ರಷ್ಟಿದ್ದಾರೆ. ಅದಕ್ಕೋಸ್ಕರ ವಾಲ್ಮೀಕಿ ಸಮುದಾಯಕ್ಕೆ 7.5% ಮೀಸಲಾತಿ ಹೆಚ್ಚಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್.ನಾಗಮೋಹನ ದಾಸರವರ ವರದಿ ನೀಡಿತ್ತು. ಅದ ಪ್ರಕಾರ ವಾಲ್ಮೀಕಿ ಸಮುದಾಯಕ್ಕೆ 7.5% ಮೀಸಲಾತಿ ನೀಡಬೇಕೆಂದು ನಮ್ಮ ತಾಲೂಕಿನ ಸಮುದಾಯದ ವತಿಯಿಂದ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತವೆ ಎಂದು ಹೇಳಿದರು. ಈ ವೇಳೆ ತಾಲೂಕಿನ ಸಮಾಜದ ಮುಖಂಡರಾದ ಸಿದ್ದಪ್ಪ ಹಳಬರ,ಅಶೋಕ ಮಾಕಣ್ಣವರ,ರಮೇಶ ನಾಯಿಕ,ಸಂತೋಷ ಮಗದ್ದುಮ್ಮ,ರಮೇಶ ಪೂಜಾರಿ,ಪೀರಪ್ಪ ನಾಯಿಕ,ಮಾಹಾದೇವ ನಾಯಿಕ,ಹಣಮಂತ ನಾಯಿಕ,ಕುಮಾರ ನಾಯಿಕ,ಶಂಕರ ನಾಯಿಕ,ಸೇರಿದಂತೆ ಹಲವರು ಉಪಸ್ಥಿತರಿದ್ದರು .
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada