ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ನೀಡಿದ ಕಾಲೇಜು ವಿದ್ಯಾರ್ಥಿಗೆ ಪೋಲಿಸ್ ಠಾಣೆಯಲ್ಲಿ ಕೂಡಿ ಹಾಕಿ ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ ಆರೋಪ
ಜೂನ್ 6ರಂದು ನಡೆದ ಘಟನೆ ತಡವಾಗಿ ಬೆಳಕಿಗೆ
ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ಇತರ ಸಿಬ್ಬಂದಿ ವಿರುದ್ಧ ಆರೋಪ
ತೆಗ್ಗಿಹಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿ ಸಿದ್ದಪ್ಪ ಹಿರೂರ್ ಆರೋಪ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮ
ತೆಗ್ಗಿಹಳ್ಳಿ ಗ್ರಾಮದಲ್ಲಿ ಮಲಪ್ರಭಾ ನದಿ ತೀರದಲ್ಲಿ ಅವ್ಯಾಹತ ಮರಳು ದಂಧೆ
ಅಕ್ರಮ ಮರಳು ದಂಧೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ವಿದ್ಯಾರ್ಥಿ ಸಿದ್ದಪ್ಪ
ಅಧಿಕಾರಿಗಳಿಗೆ ಫೋನ್ ಮಾಡಿ ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ
ತಮ್ಮೂರಿನ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ತಡೆಯುವಂತೆ ಮಾಹಿತಿ
ಸವದತ್ತಿ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳಿಗೆ, ಗಣಿ ಮತ್ತು ಭೂಗರ್ಭ ಇಲಾಖೆಗೆ ಫೋನ್ ಮಾಡಿ ಮಾಹಿತಿ
ಅಕ್ರಮ ಮರಳು ದಂಧೆಯಲ್ಲಿ ತಡೆಯುವಂತೆ ಹಿಂದಿನ ಸವದತ್ತಿ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ಗೆ ಫೋನ್ ಮಾಡಿ ಮಾಹಿತಿ
ಮಾಹಿತಿ ನೀಡುವಾಗ ನನಗೆ ಅವಾಚ್ಯವಾಗಿ ಬೈದಿದ್ದಾನೆಂದು ವಿದ್ಯಾರ್ಥಿ ಸಿದ್ದಪ್ಪ ವಿರುದ್ಧವೇ ಪೊಲೀಸರಿಗೆ ತಹಶಿಲ್ದಾರ್ ಪ್ರಶಾಂತ್ ಪಾಟೀಲ್ ದೂರು
ಸದ್ಯ ಸವದತ್ತಿಯಿಂದ ವರ್ಗಾವಣೆಗೊಂಡಿರುವ ಅಂದಿನ ಸವದತ್ತಿ ತಹಶಿಲ್ದಾರ್ ಪ್ರಶಾಂತ್ ಪಾಟೀಲ್
ತಹಶಿಲ್ದಾರ್ ದೂರಿನ ಮೇರೆಗೆ ಸಿದ್ದಪ್ಪನನ್ನು ಬಂಧಿಸಿ ಚಿತ್ರಹಿಂಸೆ ಆರೋಪ
ಬಳಿಕ ಮೂರು ದಿನ ಬೈಲಹೊಂಗಲ ಸಬ್ ಜೈಲಿನಲ್ಲಿದ್ದ ವಿದ್ಯಾರ್ಥಿ
ಬಳಿಕ ಜಾಮೀನು ಪಡೆದು ಹೊರಬಂದಿರುವ ವಿದ್ಯಾರ್ಥಿ ಸಿದ್ದಪ್ಪ
ವಿದ್ಯುತ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿ ಜೀವ ಬೆದರಿಕೆ ಆರೋಪ
ವಿದ್ಯಾರ್ಥಿಯ ಮೊಬೈಲ್ ಕಸಿದುಕೊಂಡು ತಮ್ಮ ವಶದಲ್ಲಿಟ್ಟುಕೊಂಡ ಆರೋಪ
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ಡಿಸಿಗೆ ದೂರು ಸಲ್ಲಿಸಿರುವ ಸಿದ್ದಪ್ಪ ಹಿರೂರು
ಹಿಂದಿನ ಸವದತ್ತಿ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ , ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ ಸೇರಿ ಇತರ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ
ವಿದ್ಯಾರ್ಥಿ ಪರ ನಿಂತು ಪ್ರತಿಭಟನೆ ನಡೆಸಿದ್ದ ಕೆಆರ್ಎಸ್ ಪಕ್ಷದ ಮುಖಂಡರು
ಪ್ರತಿಭಟನೆ ನಡೆಸಿ ಬೆಳಗಾವಿ ಡಿಸಿಗೂ ಸಹ ಮನವಿ ಸಲ್ಲಿಸಲಾಗಿತ್ತು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: