ಬೇಳೂರು ಗೋಪಾಲಕೃಷ್ಣ ಜನ್ಮದಿನದಂದು ರಾಜೇಶ್ ಕೃಷ್ಣನ್ – ಸಾಧುಕೋಕಿಲ ತಂಡದಿಂದ ಸಂಗೀತ ಸಂಜೆ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 22ರಂದು ಸಾಗರದ ಗಣಪತಿ ಕೆರೆ ಪಕ್ಕದಲ್ಲಿನ ಮಾರಿಕಾಂಬ ದೇವಸ್ಥಾನಕ್ಕೆ ಸೇರಿದ ಕೊಪ್ಪಲಗದ್ದೆ ಆವರಣದಲ್ಲಿ ರಾಜೇಶ್ ಕೃಷ್ಣನ್, ಸಾಧುಕೋಕಿಲ ತಂಡದಿಂದ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿದೆ.ಅಂದು ಸಂಜೆ ಆರಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಕುರಿತ ಮಾಹಿತಿಯನ್ನು ಬೇಳೂರು ಅಭಿಮಾನಿ ಬಳಗದ ಸೋಮಶೇಖರ ಲ್ಯಾವಿಗೆರೆ ಶುಕ್ರವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅಲ್ಲದೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮೂಲೆಗದ್ದೆ ಮಠದ ಶ್ರೀಗಳು, ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ವರ, ಮಾಜಿ ಶಾಸಕ ಮಧು ಬಂಗಾರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಬಹಳಷ್ಟು ಗಣ್ಯರು ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಸಂಘರ್ಷ: ಕೀವ್ ತೊರೆಯಲು ಜರ್ಮನಿಯು ನಾಗರಿಕರನ್ನು ಒತ್ತಾಯಿಸುತ್ತದೆ; ಲುಫ್ಥಾನ್ಸ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ

Sun Feb 20 , 2022
  ಬರ್ಲಿನ್: ಜರ್ಮನ್ ಸರ್ಕಾರವು ತನ್ನ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಒತ್ತಾಯಿಸಿದೆ, ಆದರೆ ಲುಫ್ಥಾನ್ಸಾ ಸೋಮವಾರದಿಂದ ಉಕ್ರೇನ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಭಾಗಶಃ ಸ್ಥಗಿತಗೊಳಿಸಲು ಯೋಜಿಸಿದೆ. “ಯಾವುದೇ ಸಮಯದಲ್ಲಿ ಮಿಲಿಟರಿ ಸಂಘರ್ಷ ಸಾಧ್ಯ… ಉತ್ತಮ ಸಮಯದಲ್ಲಿ ದೇಶವನ್ನು ತೊರೆಯಿರಿ” ಎಂದು ಜರ್ಮನ್ ಫೆಡರಲ್ ವಿದೇಶಾಂಗ ಕಚೇರಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತನ್ನ ಭದ್ರತಾ ಸೂಚನೆಗಳಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏತನ್ಮಧ್ಯೆ, ಫ್ಲ್ಯಾಗ್ […]

Advertisement

Wordpress Social Share Plugin powered by Ultimatelysocial