ಮೈಸೂರು ಭಾಗದಲ್ಲಿ ಬಿಜೆಪಿ ಬಿಗ್ ಆಪರೇಷನ್.
ಮಾಜಿ ಶಾಸಕರ ಮಗಳಿಗೆ ಗಾಳ ಹಾಕಿರುವ ಬಿಜೆಪಿ.
ಕಾಂಗ್ರೆಸ್ ನ ರಾಷ್ಟ್ರೀಯ ಮಾಧ್ಯಮ ವಕ್ತಾರೆ ಐಶ್ವರ್ಯ ಮಂಚನಹಳ್ಳಿ ಮಹದೇವ್ ಬಿಜೆಪಿಗೆ!?.
ಇಂಡಿಯನ್ ಟಿವಿಗೆ ಮೂಲಗಳಿಂದ ಮಾಹಿತಿ.
ಕೆ. ಆರ್ ನಗರದಲ್ಲಿ ಬಿಜೆಪಿಯಿಂದ ಐಶ್ವರ್ಯ ಕಣಕ್ಕಿಳಿಸಲು ಪ್ಲಾನ್.
ಮುಂದಿನ ಲೋಕಸಭಾ ಚುನಾವಣೆಗೂ ಟಿಕೆಟ್ ನೀಡುವ ಭರವಸೆ.
ಐಶ್ವರ್ಯ ಸಂಪರ್ಕದಲ್ಲಿ ಬಿಜೆಪಿಯ ಕೆಲ ಮುಖಂಡರು.
ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವ ಚಾಣಕ್ಷೆ.
ಕಾನೂನು ಪದವಿಯನ್ನು ಪಡೆದಿರುವ ಐಶ್ವರ್ಯ.
ಕೆ ಆರ್ ನಗರ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪುತ್ರಿ.
ಸಿದ್ದರಾಮಯ್ಯ ಆಪ್ತರಾಗಿದ್ದ ಮಾಜಿ ಶಾಸಕ ದಿ. ಮಂಚನಹಳ್ಳಿ ಮಹದೇವ್.
ಕಾಂಗ್ರೆಸ್ ನಿಂದಲೇ ರಾಜಕೀಯ ಜೀವನ ಆರಂಭಿಸಿರುವ ಪುತ್ರಿ ಐಶ್ವರ್ಯ.
ಮೈಸೂರು ಭಾಗದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಮಂಚನಹಳ್ಳಿ ಮಹದೇವ್ ಕುಟುಂಬ. ಮಹದೇವ್ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದಿಂದ ಪದೇ ಪದೇ ಆನ್ಯಾಯ.
ಈ ಹಿಂದೆ ಹೆಚ್ ವಿಶ್ವನಾಥ್ ಗೆ ಟಿಕೆಟ್ ನೀಡುವ ಕಾರಣಕ್ಕಾಗಿ ಎರಡು ಬಾರಿ ಟಿಕೆಟ್ ಮಿಸ್.
ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಪಕ್ಷದಲ್ಲಿ ಯಾವುದೇ ಸ್ಥಾನಮಾನ ದೊರೆಯದ ಹಿನ್ನೆಲೆ ಬೇಸರ.
ಎಲ್ಲಾ ಅರ್ಹತೆಗಳಿದ್ದರೂ ಚುನಾವಣಾ ಅಖಾಡಕ್ಕೆ ಗ್ರೀನ್ ಸಿಗ್ನಲ್ ನೀಡದ ಕಾಂಗ್ರೆಸ್.
ಈ ಹಿನ್ನೆಲೆ ಐಶ್ವರ್ಯ ಗಾಳ ಹಾಕಿ ಸೆಳೆಯುವ ಯತ್ನದಲ್ಲಿ ಬಿಜೆಪಿ.
ಬಿಜೆಪಿಯ ರಾಷ್ಟ್ರೀಯ ನಾಯಕರ ಗಮನ ಸೆಳೆದಿರುವ ಐಶ್ವರ್ಯ.
ಹಿಂದುಳಿದ ವರ್ಗಕ್ಕೆ ಸೇರುವ ಯುವ ನಾಯಕಿ.
ಮೈಸೂರು ಭಾಗದಲ್ಲಿ ಬಿಜೆಪಿಗೆ ಮಹಿಳಾ ನಾಯಕಿಯರ ಕೊರತೆ.
ಈ ಹಿನ್ನೆಲೆ ಪಕ್ಷಕ್ಕೆ ಸೇರ್ಪಡಿಸಿಕೊಳ್ಳುವ ಬಗ್ಗೆ ಕೆಲ ಬಿಜೆಪಿ ನಾಯಕರ ಮಾತುಕತೆ.
ಸದ್ಯ ಈ ಯಾವುದೇ ಬೆಳವಣಿಗೆ ಬಗ್ಗೆ ನಿರ್ಧಾರ ಕೈಗೊಳ್ಳದಿರುವ ಐಶ್ವರ್ಯ.
ಐಶ್ವರ್ಯ ಬಿಜೆಪಿ ಸೇರ್ತಾರ, ಕಾಂಗ್ರೆಸ್ ನಲ್ಲೆ ಉಳಿತಾರ ಎಂದು ಚರ್ಚೆ.
ಭವಿಷ್ಯವಿರುವ ಯುವ ನಾಯಕರನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada