ಚಿತ್ರದುರ್ಗ ತಾಲೂಕಿನಲ್ಲಿ ವೇದಾಂತ ಸೇರಿದಂತೆ ಹಲವು ಕಂಪನಿಗಳ ಅದಿರು ಸಾಗಾಟ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿನ ನಿರ್ಲಕ್ಷ್ಯದಿಂದಾಗಿ ಅಲ್ಲಿನ ಜನ ತೀವ್ರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಏನು ಮಾಡುತ್ತಿವೆ? ಜನಪರ ಕಾಳಜಿಯುಳ್ಳ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಕಾನೂನು ಹೋರಾಟ ಸಹಾ ಮಾಡೋಣ ಎಂದ ಹೈಕೋರ್ಟ್ ವಕೀಲ ಎಸ್.ಬಾಲನ್, ಗಣಿ ಕಾಯ್ದೆ ಬಂದ ನಂತರ ಕೋಟ್ಯಂತರ ರೂಪಾಯಿ ಲೂಟಿ ಆಗುತ್ತಿದೆ. ಇದರಿಂದ ಚಿತ್ರದುರ್ಗಕ್ಕೆ ಏನು ಲಾಭ? ಎಂದು ಪ್ರಶ್ನಿಸಿದರು.ಚಿತ್ರದುರ್ಗ: ಗಣಿ ಕಂಪನಿಗಳು ಇರುವ ಕಡೆಯಲ್ಲೆಲ್ಲ ಕ್ಯಾನ್ಸರ್, ಸಿಲಿಕೋಸಿಸ್, ಪರಿಸರ ಕಲುಷಿತವಾಗುವುದು ಸಾಮಾನ್ಯ. ಅಧಿಕಾರಿಗಳು, ಜನಪ್ರತಿನಿಧಿಗಳ ಬೆಂಬಲ ಇಂತಹ ಪ್ರತಿಷ್ಟಿತ ಕಂಪನಿಗಳಿಗೆ ಇರುತ್ತದೆ. ಆದರೆ, ಜನರ ಹೋರಾಟದ ಮುಂದೆ ಇವೆಲ್ಲ ಗೌಣ ಎಂದು ಹಿಂದಿನ ಅನೇಕ ನಿದರ್ಶನಗಳು ತೋರಿಸಿವೆ ಎಂದು ಹೈಕೋರ್ಟ್ ವಕೀಲ ಎಸ್.ಬಾಲನ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…