ಶಿವಮೊಗ್ಗ: ದಾರಿಯಲ್ಲಿ ಹರಿದಾಡುತ್ತಿದ್ದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ನಾಲೆಗೆ ಬಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಗಾಜನೂರು ಬಳಿಯ ತುಂಗಾ ನಾಲೆಯಲ್ಲಿ ಸಂಭವಿಸಿದೆ.ಚೇತನ್ ಹಾಗೂ ಪತ್ನಿ ಸುಷ್ಮಾ ತುಮಕೂರಿಗೆ ಕಾರಿನಲ್ಲಿ ತೆರಳುತ್ತಿದ್ದರು.ಗಾಜನೂರು ಬಳಿ ತೆರಳುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ಹಾವು ಹೋಗುತ್ತಿತ್ತು. ಕಾರಿನ ಚಕ್ರಕ್ಕೆ ಹಾವು ಸಿಲುಕುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರು ತುಂಗಾ ನಾಲೆಗೆ ಬಿದ್ದಿದೆ.ಪತ್ನಿ ಸುಷ್ಮಾ (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪತಿ ಚೇತನ್ ಅವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada