ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮಾಜಿ ಕಾರು ಚಾಲಕ.
ನಗರದ ಜಾಡರ್ ಓಣಿ ನಿವಾಸಿ ಮಲ್ಲಿಕಾರ್ಜುನ್ ದೊಡಮನಿ (43ವರ್ಷ) ಹತ್ಯೆಯಾಗಿರುವ ದುರ್ದೈವಿ.
ಕಳೆದ ಮೂರು ವರ್ಷಗಳಿಂದ ಸಂಸದ ರಮೇಶ್ ಜಿಗಜಿಣಗಿ ಹತ್ತಿರ ಕಾರು ಚಾಲನೆ ಮಾಡಿ ಬಿಟ್ಟಿದ
ನಗರದಲ್ಲಿ ಅಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ
ನಿನ್ನೆ ದಿನ ಬುಧವಾರ ತಡ ರಾತ್ರಿ ತನ್ನ ಅಕ್ಕ ಶಾಂತವ್ವ ಳನ್ನು ಆಕೆಯ ಮನೆಗೆ ಬಿಟ್ಟು ಬರಲು ಹೋಗಿದ್ದ ಹಿಂತುರುಗಿ ಬರುವಾಗ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತದೆ
ಹತ್ಯೆಗೆ ನಿಖರ ಕಾರಣ ಕಾರಣ ತಿಳಿದು ಬಂದಿಲ್ಲ ವಾದರೂ ಹಣಕಾಸಿನ ವ್ಯವಹಾರದಿಂದ ಹತ್ಯೆ ಆಗಿರಬಹುದೆಂದು ಕುಟುಂಬದವರು ಶಂಕಿಸಿದ್ದಾರೆ..
ಘಟನಾ ಸ್ಥಳಕ್ಕೆ ಎ ಎಸ್ಪಿ ಶಂಕರ್ ಮಾರಿಹಾಳ ಆದರ್ಶ ನಗರ ಪಿಎಸ್ಐ ಯತೀಶ್ ಹಾಗೂ ಪೊಲೀಸ್ ಸಿಬ್ಬಂದಿಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ
ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://play.google.com/store/apps/details?id=com.speed.newskannada