ಅನಾಥರು ಅನಾಥರೇ, ಅವರ ಹೆತ್ತವರ ಸಾವು ಹೇಗೆ ಸಂಭವಿಸಿದರೂ, ಮಕ್ಕಳಿಗಾಗಿ ಉದ್ದೇಶಿಸಿರುವ ಪಿಎಂ ಕೇರ್ಸ್ ನಿಧಿ ಯೋಜನೆಯನ್ನು COVID-19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದವರೆಗೆ ನೀಡುವಂತೆ ಇತರ ಎಲ್ಲಾ ಅನಾಥರಿಗೂ ವಿಸ್ತರಿಸಬಹುದೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ನವದೆಹಲಿ: ಅನಾಥರು ಅನಾಥರೇ, ಅವರ ಹೆತ್ತವರ ಸಾವು ಹೇಗೆ ಸಂಭವಿಸಿದರೂ, ಮಕ್ಕಳಿಗಾಗಿ ಉದ್ದೇಶಿಸಿರುವ ಪಿಎಂ ಕೇರ್ಸ್ ನಿಧಿ ಯೋಜನೆಯನ್ನು COVID-19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದವರೆಗೆ ನೀಡುವಂತೆ ಇತರ ಎಲ್ಲಾ ಅನಾಥರಿಗೂ […]

  ಬೆಂಗಳೂರು, ಸೆಪ್ಟೆಂಬರ್ 16: ಜಾತಿ ಧರ್ಮದ ಬೇಧ ಬಾವ ಇಲ್ಲದೇ ಎಲ್ಲಾರೂ ಒಗ್ಗೂಡಿ ಸಂಭ್ರಮಿಸುವ ಸಂತಸದ ಹಬ್ಬ ಎಂದರೆ ಅದು ಗಣೆಶೋತ್ಸವ. ವಿಘ್ನ ನಿವಾರಕ ಗಣೇಶನ ಆರಾಧನೆ ಮಾಡುವ ಚೌತಿಯ ದಿನವನ್ನು ದೇಶದಾದ್ಯಂತ ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇಂತಹ ಹಬ್ಬದಂದು ಯಾವ ರೀತಿ ಗೈಡ್ಲೈನ್ ಇದೆ? ಪೊಲೀಸರಿಂದ ಗಣೇಶನ ಕೂರಿಸುವವರಿಗೆ ಏನು ರೂಲ್ಸ್ ಇದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಬಾರಿ ಗಣೇಶನ ಕೂರಿಸಬೇಕು ಎಂದರೆ […]

ಮಹಾಂತೇಶ್‌ ಸ್ವಾಮೀಜಿಯವರು ನಿಧನರಾಗಿದ್ದಾರೆ, ಇವರು  ಹಾವೇರಿ ಜಿಲ್ಲೆಯ ಚಳಗೇರಿ ನಡೆದಾಡುವ ದೇವರೇಂದೆ ಪ್ರಸಿದ್ದಿಯನ್ನು ಪಡೆದಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಚಳಗೇರಿಯ ಕಟಗಿಹಳ್ಳಿಯಲ್ಲಿ,  ಮಠಾಧೀಶರಾಗಿದ್ದರು ಮತ್ತು ಮಹಾಂತೇಶ್‌ ಸ್ವಾಮೀಜಿಯವರು ಅನಾರೋಗ್ಯದ ಸಮಸ್ಯೆಯಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ವಿಧಿಯಾಟ ಬಲ್ಲವರಾರು..? ಅನಾರೋಗ್ಯದಿಂದ ಬಳಲುತ್ತಿದ್ದ ಚಳಗೇರಿಯ ಕಟಗಿಹಳ್ಳಿ ಮಠದ ಮಹಾಂತೇಶ್‌ ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆಗೆಂದು ದಾಖಲಾಗಿದ್ದ ಆಸ್ಪತ್ರೆಯಲ್ಲೇ ಚಿಕಿತ್ಸೆ ಫಲಕಾರಿಯಾಗದೆ ನಿಧಿವಶರಾಗಿದ್ದರೆ. ಅರವಿಂದ್ ಘೋಷ್ ಅವರ ಬಗ್ಗೆ ಸಂಶೋದನೆಯನ್ನು ಮಾಡಿ […]

‘ಕರ್ನಾಟಕ ಭಾರತ್ ಗೌರವ್ ಕಾಶಿ – ಗಯಾ ದರ್ಶನ’ ಯಾತ್ರೆಗೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಳು ದಿನಗಳ ಯಾತ್ರೆಯನ್ನು ಒಂಬತ್ತು ದಿನಗಳಿಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 23ರಂದು ಬೆಂಗಳೂರಿನಿಂದ ಯಾತ್ರೆ ಹೊರಡಲಿದೆ. ಊಟ, ವಸತಿ, ಮೂರು ಟೈಯರ್ ಎಸಿ ರೈಲು ಪ್ರಯಾಣ ಒಳಗೊಂಡಿರುವ ಈ ಯಾತ್ರೆಯ ವೆಚ್ಚ 22,500 ರೂಪಾಯಿಗಳಾಗಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ 7,500 ರೂಪಾಯಿ ಸಹಾಯಧನ ಸಿಗಲಿದೆ.   ಕಾಶಿ – ಗಯಾ ಯಾತ್ರೆಗೆ […]

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಶನಿವಾರ ಎನ್ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಶನಿವಾರ ಎನ್ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ, ಹತ್ಲಂಗಾದ ಮುಂಚೂಣಿ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಸೇನೆಪಡೆ ನಡುವೆ ಇಂದು ಬೆಳಿಗ್ಗೆ ಎನ್ಕೌಂಟರ್ ಪ್ರಾರಂಭವಾಯಿತು. ಈ ವೇಳೆ ಸೇನಾಪಡೆಗಳ ಕಾರ್ಯಾಚರಣೆಗೆ ಬಾರಾಮುಲ್ಲಾ ಪೊಲೀಸರು ಕೂಡ […]

ದೋಹಾ: ಗುಜರಾತ್‌ನ ದಾಹೋದ್ ಜಿಲ್ಲೆಯ ಜಾಕೋಟ್ ನಿಲ್ದಾಣದಲ್ಲಿ ಶುಕ್ರವಾರ ದಾಹೋದ್-ಆನಂದ್ ಮೆಮು ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಸಣ್ಣ ಮತ್ತು ಮಧ್ಯಮ-ದೂರ ಮಾರ್ಗಗಳಿಗೆ ಬಳಸಲಾಗುವ ಎಲೆಕ್ಟ್ರಿಕ್ ಬಹು-ಘಟಕ ರೈಲು MEMU, ಜಾಕೋಟ್ ನಿಲ್ದಾಣದಲ್ಲಿ ಬೆಂಕಿ ಸಂಭವಿಸಿದ ಸಂದರ್ಭದಲ್ಲಿ ಗೋಧ್ರಾ ಕಡೆಗೆ ಹೋಗುತ್ತಿತ್ತು.   ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ರೈಲು ಬೆಂಕಿಯಿಂದ ಧಗಧಗಿಸುತ್ತಿದ್ದು, ಪ್‌ರಯಾಣಿಕರೆಲ್ಲರೂ ರೈಲಿನಿಂದ ಕೆಳಗಿಳಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. […]

ಮಂಗಳೂರು, ಸೆಪ್ಟೆಂಬರ್‌ 16: ಗಣೇಶೋತ್ಸವದ ಸಂದರ್ಭ ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ ಗಣೇಶನ ವಿಗ್ರಹ ತಯಾರಿಸುವುದು ಒಂದು ವಿಶಿಷ್ಟವಾದ ಕಲೆ. ಈ ವಿದ್ಯೆ ಎಲ್ಲರಿಗೂ ಒಲಿದಿರುವುದಿಲ್ಲ. ಯಾವುದೋ ತರಬೇತಿ ತರಗತಿಯಿಂದ ಕಲಿಯಲು ಸಾಧ್ಯವಿಲ್ಲ ಶೃದ್ಧೆ ಹಾಗೂ ಭಕ್ತಿಯಿಂದ ಮಾತ್ರ ಇದು ಸಾಧ್ಯ. ಆದರೆ ಮಂಗಳೂರಿನ ಕುಟುಂಬವೊಂದು ಬರೋಬ್ಬರಿ ನಾಲ್ಕು ತಲೆಮಾರುಗಳಿಂದ ಗಣಪನ ಮೂರ್ತಿ ತಯಾರಿಯಲ್ಲಿ ತಮ್ಮನ್ನು ತೊಡಗಿಸಿದೆ. ಗಣೇಶೋತ್ಸವ ಬರುತ್ತಿದ್ದಂತೆ ಈ ಮನೆಮಂದಿಯೆಲ್ಲಾ ಗಣಪನ ಮೂರ್ತಿಮಾಡುವ ಕಾಯಕದಲ್ಲಿ […]

ಹೈದರಾಬಾದ್: ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದೆ. ಇಂದು ಸುಮಾರು 30 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಐಸಿಸ್ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ದಾಳಿ ನಡೆಸಿದೆ. ಐಸಿಸ್ ಉಗ್ರಗಾಮಿ ಮತ್ತು ನೇಮಕಾತಿ ಪ್ರಕರಣದಲ್ಲಿ ತಮಿಳುನಾಡು ಮತ್ತು ತೆಲಂಗಾಣ ಎರಡರಲ್ಲೂ 30 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಕೊಯಮತ್ತೂರಿನ 21 ಸ್ಥಳಗಳು, ಚೆನ್ನೈನ ಮೂರು ಸ್ಥಳಗಳು, ಹೈದರಾಬಾದ್‌ನ ಐದು ಸ್ಥಳಗಳು ಮತ್ತು ತೆಂಕಶಿಯ ಒಂದು ಸ್ಥಳದಲ್ಲಿ ತಪಾಸಣೆ […]

ಇಟಾನಗರ: ಇಟಾನಗರದಲ್ಲಿ 18 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ನಾಯಿ ಕಚ್ಚಿ ರೇಬೀಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಘಟನೆ ನಂತರ ತಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವಂತೆ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದ್ದಾರೆ.   ಜುಲ್ಲಾಂಗ್‌ನಲ್ಲಿರುವ ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿ ನ್ಯಾರೋ ರುಸಿಂಗ್ ಗುರುವಾರ ಮೃತಪಟ್ಟಿದ್ದಾರೆ ಎಂದು ರಾಜ್ಯ ಕಣ್ಗಾವಲು ಅಧಿಕಾರಿ ವೈದ್ಯ ಲೋಬ್ಸಾಂಗ್ ಜಂಪಾ ತಿಳಿಸಿದ್ದಾರೆ. ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಚ್ಚಿದ ನಂತರ ಜನರು […]

ಮಲಗಿದ್ದ ದಂಪತಿಯನ್ನು ದುಷ್ಕರ್ಮಿಯೊಬ್ಬ ಹತ್ಯೆ ಮಾಡಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಅನಂತಪುರ (ಆಂಧ್ರಪ್ರದೇಶ): ಮನೆಯ ಮುಂದೆ ಮಲಗಿದ್ದ ದಂಪತಿಯನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಅನಂತಪುರ ಜಿಲ್ಲೆಯ ಯಡಿಕಿ ಗ್ರಾಮದಲ್ಲಿ ನಡೆದಿದೆ. ನಿಟ್ಟೂರಿನ ಸೊಮ್ಮಕ್ಕ ಮತ್ತು ಬಾಲುರಾಜು ಮೃತರೆಂದು ಗುರುತಿಸಲಾಗಿದೆ. ಅದೇ ಗ್ರಾಮದ ಪ್ರಾಸಾದ್ ಎಂಬ ಆರೋಪಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ದಂಪತಿಯ ಕೊಲೆ ಮಾಡಿ ಸುಮ್ಮನಾಗದ ಕ್ರೋರಿ ಪಕ್ಕದಲ್ಲಿ ಮಲಗಿದ್ದ ಮಗಳನ್ನು ಕೊಲೆ […]

Advertisement

Wordpress Social Share Plugin powered by Ultimatelysocial