ಎರಡು ವರ್ಷದ ಮಗು‌ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆಯು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ. ಎರಡು ವರ್ಷದ ವಿನೋದ್ ಕುಮಾರ್ ಮೃತ ಮಗುವು  ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಗುಂಡಿಗೆ ಮಗುವು ಬಿದ್ದು,ತೀವ್ರವಾಗಿ ಗಾಯಗೊಂಡಿದೆ. ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿರುವ ಘಟನೆ ಕಂಡುಬಂದಿದೆ. ಕಟ್ಟಡದ ಮಾಲೀಕನ ವಿರುದ್ದ ದೂರು ದಾಖಲು ಮಾಡಿದ್ದು, ಐಪಿಸಿ ಸೆಕ್ಷನ್ 304(A) ಅಡಿ ದೂರು […]

ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನ ಕಸಬಾ  ಹೋಬಳಿ ಮಟ್ಟದಲ್ಲಿ  ಆಯೋಜಿಸಲಾಗಿತ್ತು. ಕೋಲಾರದ  ಶ್ರೀನಿವಾಸಪುರ  ತಾಲೂಕಿನ  ಕಸಬಾ  ಹೋಬಳಿಯಲ್ಲಿ   ಕಾರ್ಯಕ್ರಮಕ್ಕೆ  ಜಿಲ್ಲಾಧಿಕಾರಿ ಸತ್ಯಭಾಮ ಅವರು  ಚಾಲನೆ ನೀಡಿದರು.  ಈ  ಕಾರ್ಯಕ್ರಮದಲ್ಲಿ ಪಿಂಚಣಿ, ವೃದ್ದಾಪ್ಯ ವೇತನ, ಖಾತೆ ಬದಲಾವಣೆ ಸೇರಿಂದತೆ ಸಾಕಷ್ಟು ಅರ್ಜಿಗಳನ್ನ ಸ್ಥಳದಲ್ಲಿಯೇ ವಿಲೇವಾರಿ ಮಾಡಿದರು.  ನಾಗರಿಕರು ತಾಲ್ಲೂಕು ಕೇಂದ್ರಕ್ಕೆ  ಬರುವುದಕ್ಕೆ ಕಷ್ಟ ಎಂದು ಭಾವಿಸಿ ಹೋಬಳಿವಾರು ಕಂದಾಯ ಮತ್ತು ಪಿಂಚಣಿ ಆದಾಲತ್ ಮಾಡಲಾಗುತ್ತಿದೆ ಎಂದು ಹೇಳಿದರು.   ಈ […]

ಭ್ರಷ್ಟ ಅಧಿಕಾರಿಗೆ ಸಂಬಂಧಿಸಿದಂತೆ ಏಕಕಾಲಕ್ಕೆ 3 ಕಡೆ ಸಿಸಿಬಿ ದಾಳಿ ನಡೆಸಿದ್ದಾರೆ. ಗದಗ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಅಧಿಕಾರಿ ಎಸ್.ಎನ್ ರುದ್ರೇಶ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಪೊಲೀಸರಿಂದ ದಾಳಿ ನಡೆಸಿದ್ದು, ನಗರದ ನೌಕರ ಭವನ ಬಳಿ ಕ್ವಾಟರ್ಸ್,ಜಿಲ್ಲಾಡಳಿತ ಭವನದ ಕಚೇರಿ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರ ನಿವಾಸದ ಮೇಲೆ ದಾಳಿ ನಡೆದಿದೆ. ಅಧಿಕಾರಿ ಎಸ್.ಎನ್ ರುದ್ರೇಶ ಆದಾಯಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ […]

ಬಾಗಲಕೋಟೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯ 528 ಎಕರೆ ಪ್ರದೇಶದಲ್ಲಿರುವ ಶ್ರೀಗಂಧದ ಮರಗಳಲ್ಲಿ ಇತ್ತೀಚೆಗೆ 8 ರಿಂದ 10 ಮರಗಳ ಕಳ್ಳತನವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಏಳು ಜನರ ತಂಡ ಪೂಜಾವನ ಹಿಂಭಾಗದ ಸಿಬ್ಬಂದಿ ವಸತಿ ಗೃಹದ ಹಿಂದೆ ಹುವುಗಳ ಬನದ ಬಳಿ ಇದ್ದ ಶ್ರೀಗಂಧದ ಮರಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಕಳುವು ಮಾಡಿದೆ. ಭದ್ರತೆಗೆ ಇದ್ದ ಮೂವರು ಸಿಬ್ಬಂದಿ ಕಳ್ಳರನ್ನು ನೋಡಿ […]

ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಬಗ್ಗೆ, ಹಾಗೂ ಸದರಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಆಗ್ರಹಿಸಿದ್ದಾರೆ. ಸಿ, ರಾಮನಗರದ ಡಿ.ಸಿ ಕಚೇರಿಯ ಮುಂದೆ ದಲಿತ ಸಂಘರ್ಷ ರಾಮನಗರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ರಾಮನಗರ ಜಿಲ್ಲಾಧ್ಯಕ್ಷರಾದ […]

ಮೂರು ಮಾನಿಟರ್ ಒಂದು ಲ್ಯಾಪ್ ಟಾಪ್ ಒಂದು ಸಿಪಿಯು ಮತ್ತು ಸುಮಾರು 50-60 ಸಾವಿರ ಬೆಲೆ ಬಾಳುವ ವಿಡಿಯೋ ಕ್ಯಾಮರಾವನ್ನು ಕದ್ದು ಸಾಗಿಸುತ್ತಿದ್ದ ಇಬ್ಬರು ಕಳ್ಳರನ್ನು ಕನಕಪುರ ತಾಲ್ಲೂಕಿನ ಟಿ.ಬೇಕುಪ್ಪೆ ಸರ್ಕಲ್ ಬಳಿ ಕನಕಪುರ  ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಮೊದಲೇ ಆರೋಪಿಗಳ ಮೇಲೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೇಸ್ ದಾಖಲಾಗಿದ್ದು ಆರೋಪಿಯು ಕನಕಪುರ ತಾಲೂಕಿನ ನಿಡಗಲ್ ಗ್ರಾಮದ ಬ್ಯಾಟರಾಜ(26), ಇನ್ನೊಬ್ಬ ಆರೋಪಿಯು ಚಿಕ್ಕ ಕೊಪ್ಪದ ಮಂಜು (28) […]

ಬೀದರ್ ಬಿದ್ರಿ ಕಲೆಯಿಂದಾಗಿಯೂ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ಹಲವಾರು ದಶಕಗಳಿಂದಲೂ ಬಿದ್ರಿ ಕಲಾಕೃತಿಗಳ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡ ಅನೇಕರು ಕರ್ನಾಟಕ ಸರ್ಕಾರದ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಿಟ್ಟಿಸಿ ಬೀದರ ಜಿಲ್ಲೆಯ ಕೀರ್ತಿ ಹಬ್ಬಿಸಿದ್ದಾರೆ. ಇಂತಹ ಮಹತ್ವದ ಪಾರಂಪರಿಕ ಕಲೆಗಳಲ್ಲೊಂದಾದ ಪ್ರಸಿದ್ಧ ಬಿದ್ರಿ ಕಲೆಗೆ ಪುನಶ್ಚೇತನ ಮತ್ತು ಈ ಬಿದ್ರಿ ಕಲೆಯ ಕರಕುಶಲಗಾರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರತ್ನಪ್ರಭ ಅವರು ಹಾಗೂ ಬೀದರ್ […]

ಇಂದು  ಕ್ರಿಕೆಟ್ ಜಗತ್ತಿಗೆ  ಕಂಡು ಕೇಳರಿಯದ  ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ಇಷ್ಟು ದಿನ  ಮನರಂಜನೆಯ ಹೊಳೆಯಲ್ಲಿ ಮಿಂದೇಳುತ್ತಿದ್ದ ಕ್ರಿಕೆಟ್ ಪ್ರಿಯರು ಇದೀಗ ಕಣ್ಣೀರು ಹಾಕುವಂತ್ತಾಗಿದೆ.   ಈ ಸುದ್ದಿಯಿಂದ ಇದೀಗ ವಿಶ್ವ ಕ್ರಿಕೆಟ್ ಕೂಡ  ಒಂದು ಕ್ಷಣ ದಂಗಾಗಿ ಹೋಗಿದ್ದು ಅಕ್ಷರಶಃ ಸ್ತಬ್ಧವಾಗಿದೆ. ಹೌದು, ಅಫ್ಘಾನಿಸ್ತಾನ ತಂಡದ ಸ್ಟಾರ್  ಆರಂಭಿಕ ಆಟಗಾರ ನಜೀಬ್ ಭೀಕರ ಅಪಘಾತದಲ್ಲಿ ಉಸಿರು  ನಿಲ್ಲಿಸಿದ್ದಾರೆ. ನಿನ್ನೆ ಅಫ್ಘಾನಿಸ್ತಾನದಲ್ಲಿ ನಡೆದ ಭೀಕರ ಅಪಘಾತದಲ್ಲಿ  ಗಂಭೀರ ಗಾಯಗೊಂಡಿದ್ದ ನಜೀಬ್ […]

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು. ಕನ್ನಡ ಕಾರ್ಯಕ್ರಮ ಒಂದರಲ್ಲಿ ಮರಾಠಿ ಫಲಕ ಹಾಕಿರುವದನ್ನು ನೋಡಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ನೀರು ಕುಡಿದು ಕನ್ನಡ ಕನ್ನಡನಾಡಿನಲ್ಲಿ ಬೆಳೆದು ಮರಾಠಿ ಫಲಕ ಹಾಕಿದ್ದರಿದ ಕನ್ನಡಿಗರ ಪ್ರತಿಭಟನೆ ಮಾಡಿದ್ದು, ಎಲ್ಲಿ ಹೋದರು ಕರ್ನಾಟಕ ರಕ್ಷಣಾ ವೇದಿಕೆ ಶ್ರೀಮಂತ ಪಾಟೀಲ ಅವರಿಗೆ ಬಹಿಷ್ಕಾರ ಹಾಕುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಪ್ರತಿಭಟನೆಯಲ್ಲಿ ಗೋಕಾಕ ಕಾರ್ಯಕರ್ತರು , […]

ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ  ಮೇಲೆ‌ ಮೃಧುಧೋರಣೆ ತೊರುತ್ತಿದೆ ಭಾಲ್ಕಿಯಲ್ಲಿ. ಕೆ ಪಿ  ಸಿ ಸಿ ಕಾರ್ಯಾಧ್ಯಕ್ಷ ಈಶ್ವರ ಬಿ.ಖಂಡ್ರೆ ಬಿಜೆಪಿ ನಾಯಕರ ವಿರುದ್ದ ಕಿಡಿ  ಕಾರಿದ್ದಾರೆ.ಬೀದರ್ ನಲ್ಲಿ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಭಾಗದ 200ಕ್ಕೂ ಹೆಚ್ಚು  ಯುವಕರನ್ನು ಮೆಗಾ ಎಂಜನಿಯರಿಂಗ್ ಕಂಪನಿ ಕುವೈತ್ ಗೆ ಕರೆದೊಯ್ಯಲಾಗಿದೆ,ಕೊರೊನಾ ಹಿನ್ನೆಲೆ, ಅವರ ಸ್ಥಿತಿ ಪರದೇಶದಲ್ಲಿ ಅತಂತ್ರವಾಗಿದೆ.. ಅವರ ವೀಸಾ ಅವಧಿ ಮುಗಿದು, ಊಟಕ್ಕೂ ಪರದಾಡುತ್ತಿದ್ದಾರೆ.ಕರೆದೊಯ್ದವರು ಸುಳ್ಳು ಹೇಳಿ, ಬೋಗಸ್ ಟಿಕೆಟ್ ಕೊಡುತ್ತಿರುವ […]

Advertisement

Wordpress Social Share Plugin powered by Ultimatelysocial