ಡಿಬಾಸ್ ಕಟೌಟ್‌ಗೆ ಮದ್ಯಾಭಿಷೇಕ

ಇಂದು ರಾಜ್ಯದ್ಯಂತ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾಗಿದೆ. ಇಂತಹ ಸಂದರ್ಭದಲ್ಲಿ ವಿವಿಧೆಡೆ ನಟ ದರ್ಶನ್ ಅಭಿಮಾನಿಗಳು, ಹಾಲು, ಪುಷ್ಟ ಸೇರಿದಂತೆ ವಿವಿಧ ಅಭಿಷೇಕಗಳನ್ನು ದರ್ಶನ್ ಕಟೌಟ್ ಗೆ ಮಾಡುತ್ತಿದ್ದಾರೆ. ಆದರೆ ತುಮಕೂರಿನಲ್ಲಿ ಮಾತ್ರ, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಕಟೌಟ್ ಗೆ  ಮದ್ಯಾಭಿಷೇಕ ಮಾಡಿ, ಅತಿರೇಕ ಮೆರೆದಿದ್ದಾರೆ.

ತುಮಕೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಟೌಟ್ ಗೆ ದರ್ಶನ್ ಅಭಿಮಾನಿಗಳು ಮದ್ಯದ ಅಭಿಷೇಕ ಮಾಡಿರೋದು, ಈಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಿದೆ. ಚಿತ್ರಮಂದಿರಕ್ಕೆ ಆಗಮಿಸಿದಂತ ಸಾರ್ವಜನಿಕರು ಕೂಡ ಕಿರಿಕಿರಿ ಅನುಭವಿಸುವಂತಾಯಿತು. ಇದರಿಂದಾಗಿ ನಟ ದರ್ಶನ್ ಅಭಿಮಾನಿಗಳ ಅತೀರೇಕದ ವರ್ತನೆಗೆ ಸಾರ್ವಜನಿಕರು ಕೂಡ ಕಿಡಿಕಾರಿದ್ದಾರೆ.

ಇದನ್ನೂ ಓದಿ:ನಾಗಾಲ್ಯಾಂಡ್‌ಯಿಂದ ಬಂದ ಹ್ಯಾಕ್ ಚೋರರು ..!

Please follow and like us:

Leave a Reply

Your email address will not be published. Required fields are marked *

Next Post

ಹಸುಗೂಸನ್ನು ಬೀದಿಗೆಸೆದ ಪಾಪಿ ಪೋಷಕರು

Sat Mar 13 , 2021
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನಲ್ಲಿ ಮನುಕಲಕುವ ಘಟನೆಯೊಂದು ನಡೆದಿದೆ. ನವಜಾತು ಗಂಡು ಶಿಶುವನ್ನು ಪ್ಲಾಸ್ಟಿಕ್ ಕವರನಲ್ಲಿ ಸುತ್ತಿ ತಬ್ಬಲಿ ಮಾಡಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇನ್ನು ರಾತ್ರಿ ಯಾರು ಇಲ್ಲದ ವೇಳೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಮಗು ಹುಟ್ಟಿದ ಸಂಗತಿಯನ್ನು ಮುಚ್ಚಿಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಮೂರಗೋಡ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ತಕ್ಷಣವೇ […]

Advertisement

Wordpress Social Share Plugin powered by Ultimatelysocial